ಪುಟಗಳು

31 December 2011

ವರ್ಷ ಕಳೆದರೇನು.... ನಾವು ನಾವೇ....!!!


ಇತಿಹಾಸದ ಪುಟಕ್ಕೆ ಮತ್ತೊದು ವರ್ಷ ಸೇರಿದೆ....ಇಂಥಹ ಅದೆಷ್ಟೋ ವರ್ಷಗಳು ಸರಿದಿವೆ ಆದರೂ ಮನುಷ್ಯನ ಆಸೆಗೆ ಮಿತಿಯೇ ಇಲ್ಲ, ಇದು ಅದೆಷ್ಟು ಸತ್ಯವಾದ ಮಾತು...ಹಣ, ಅಂತಸ್ತು, ಹೆಸರು ಇತ್ಯಾದಿ ಇತ್ಯಾದಿ ಅವನ ಬಯಕೆ... ಇದೆಲ್ಲ ಬಿಡಿ ಇದರಂತಹ ಅದೆಷ್ಟೋ ವರ್ಷ ಕಳೆದರು ಇನ್ನು ಬಾಳಿ ಬದುಕಬೇಕೆಂಬ ಆಸೆ...ಬದುಕಿರುವಷ್ಟು ದಿನ ಸುಖದಿಂದಲೇ ಬದುಕಬೇಕೆಂಬ ಕನಸು...ನಮಗೆಲ್ಲ ಗೊತ್ತಿರುತ್ತದೆ ಬದುಕಿನಲ್ಲಿ ಬರೀ ಸುಖವನ್ನೇ ಅನುಭವಿಸಲು ಸಾದ್ಯವಿಲ್ಲ ಎಂದು...ಆದರು ನಿಲುಕದಕ್ಕೆ ಕೈ ಚಾಚುತ್ತಿರುತ್ತೇವೆ...ನಮಗೆ ಏನು ಸಿಕ್ಕರೆ ಸುಖವಾಗಿರುತ್ತೇವೆ ಎಂಬುದರ ಅರಿವು ನಮಗಿರುತ್ತದೆ.... ಅಷ್ಟಕ್ಕೂ ನಾವು ಬಯಸುವುದೇನು?? ಇಡೀ ಜೀವನ ನೆಮ್ಮದಿಯಾಗಿ  ಇರಬೇಕಂದೆ?? ಬಹಳಷ್ಟು ಜನರ ಮಟ್ಟಿಗೆ ಇದು ಹೌದು ಎನ್ನುವುದಾದರೆ ಆ ನೆಮ್ಮದಿ ಎಂಬ ಪದದಲ್ಲಿ ಏನೆಲ್ಲಾ ಅಡಗಿದೆ....ನೆಮ್ಮದಿಯಾಗಿ ಇರಲು ಬಯಸುವುದು ಇಷ್ಟೇ....ಒಂದು ಸ್ವಂತ ಮನೆ...ಒಂದು ಕಾರು..ಮುದ್ದಾದ ಸಂಸಾರ...ನಮ್ಮ ಸರ್ವಜ್ಞನ ವಚನ ಇದೆಯಲ್ಲ...ಬೆಚ್ಚನೆ ಗೂಡು..ವೆಚ್ಚಕ್ಕೆ ಹೊನ್ನು..ಇಚ್ಛೆ ಅರಿವ ಸತಿ.. ಇಷ್ಟಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದು ಆದರೆ ನಾವು ಸ್ವರ್ಗಕ್ಕೆ ಕಿಚ್ಚು ಹಚ್ಚುವ ಬದಲು ಇರುವ ಜೀವನವನ್ನ ನರಕ ಮಾಡಿಕೊಂಡು ಸ್ವರ್ಗಕ್ಕೆ ಹೋಗಲು ಪರಿತಪಿಸುತ್ತಿರುತ್ತೇವೆ.
ಇದು ಒಬ್ಬ  ವ್ಯಕ್ತಿಯ ಕಥೆಯಾದರೆ ಇನ್ನು ವ್ಯವಸ್ಥೆಗೆ ಬರೋಣ..ನಮ್ಮ ವ್ಯವಸ್ಥೆಯೋ ಭ್ರಷ್ಟಾಚಾರದಲ್ಲಿ ಮುಳುಗಿ ಮಿಂದು ಅದರಲ್ಲಿಯೂ ಬೆರೆತು ಹೋಗಿದೆ...ವ್ಯವಸ್ಥೆ ಎಂದರೆ ಭ್ರಷ್ಟಾಚಾರ... ಭ್ರಷ್ಟಾಚಾರ  ಎಂದರೆ ವ್ಯವಸ್ಥೆ ಎಂಬಂತಾಗಿದೆ...೨೦೧೦ ಹಗರಣಗಳ ಸರಮಾಲೆಯನ್ನೇ ನಾವು ನೋಡಿದ್ದೇವೆ ೨೦೧೧ ಅದಕಿಂತ ಏನು ಭಿನ್ನವಾಗಿಲ್ಲ... ಹಗರಣಗಳು...ರಾಜಕೀಯ ಸಮರ...ಕುರ್ಚಿಗಾಗಿ ಗುದ್ದಾಟ... ಎಲ್ಲಿ ಹೆಚ್ಚು ಲಾಭ ಮಾಡಿಕೊಳ್ಳಬಹುದೋ ಅಲ್ಲಿ ತಮ್ಮ ಬೆಲೆ ಬೇಯಿಸಿಕೊಳ್ಳುವ ಹೊಲಸು ನಾಯಕರು, ಪಕ್ಷದಿಂದ ಪಕ್ಷಕ್ಕೆ ಹಾರುವ...ಪಕ್ಷದಲ್ಲಿ ನಮಗೆ ಬೆಲೆ ಇಲ್ಲ ಎಂದು ರಾಜಿನಾಮೆ ಕೊಡುವ ನಾಯಕರು,...ಅಲ್ಲಿ ರಾಜಿನಾಮೆ ನೀಡಿ ಚುನಾವಣೆ ಎದುರಿಸಲು ನಾನು ಸಿದ್ದ ಎಂದು ಹೆಮ್ಮೆಯಿಂದ ದೇಶ ರಕ್ಷಣೆಗೆ ಹೊರಡಲು ಸಿದ್ದವಿರುವ ಸೈನಿಕರಂತೆ ಹೆಮ್ಮೆಯಿಂದ  ಹೇಳಿಕೊಳ್ಳುವ ಹೊಲಸು ರಾಜಕೀಯ ವ್ಯಕ್ತಿಗಳು...ಚುನಾವಣೆಗೆಂದು ಲಕ್ಷಂತ ರುಪಾಯಿ ಖರ್ಚು ಮಾಡಿ ಅದನ್ನು ಸಾಮಾನ್ಯ ಜನರ ತಲೆಯ ಮೇಲೆ ಹೇರುವುದು... ಜನ ಸಾಮಾನ್ಯ  ಅಲ್ಲಿ ಇಲ್ಲಿ ಉಳಿಸಿ ತೆರಿಗೆ ಕಟ್ಟಿದ ಹಣ ಎಲ್ಲಿಲ್ಲಿ ಹೇಗೇಗೆ ವೆಚ್ಚವಾಗುತ್ತದೆ ನೋಡಿ...
ಇನ್ನು ಸಾಮಾನ್ಯನ ಕೂಗು ಕೇಳದ ಸರ್ಕಾರ....೩ ತಿಂಗಳಿಗೊಮ್ಮೆ ೪ ತಿಂಗಳಿಗೊಮ್ಮೆ ಪೆಟ್ರೋಲ್, ಹಾಲು ದಿನ ಬಳಕೆ ವಸ್ತುಗಳ ಬೆಲೆ ಏರಿಕೆ....ಹೇಗಿದ್ದರೂ ಕೊಂಡುಕೊಳ್ಳುತ್ತರೆಂಬ ಭಂಡ ಧೈರ್ಯ ನಮ್ಮ ಸರ್ಕಾರಕ್ಕೆ...ಅಭಿವೃದ್ದಿ ಅಬ್ಧಿವ್ರುದ್ದಿ ಎಂದು ಬೊಬ್ಬೆ ಹೊಡೆಯುವ ಸರ್ಕಾರ...ನಮ್ಮ ಸರ್ಕಾರ ಇಷ್ಟು ಮಾಡಿದೆ...ಅಷ್ಟು ಮಾಡಿದೆ ಎಂದು ಹೇಳಿಕೊಳ್ಳುವ ಮುಂಚೆ ಮಾಡಿರುವಷ್ಟರಲ್ಲಿ ಎಷ್ಟು ಪಾಲು ನಿಜವಾಗಿ ಸೇರಬೇಕಾಗಿರುವ ಕಡೆ ಸೇರಿದೆ ಎಂದು ನೋಡಿದರೆ ಉತ್ತಮ....ವ್ಯವಸ್ಥೆಯ ಬಗ್ಗೆ ಭ್ರಮ ನಿರಸನ ಗೊಂಡಿರುವ ಮತದಾರ ಪ್ರಭು...ಪ್ರಭು ಅಲ್ಲ ನಿಜವಾದ ಅರ್ಥದಲ್ಲಿ ಭಿಕ್ಷುಕ....ಅಯ್ಯೋ ಬಿಡಿ ಇಲ್ಲ ಸರ್ಕಾರಗಳು ಅಷ್ಟೇ ಓಟಕುವುದಷ್ಟೇ ನಮ್ಮ ಕೈನಲ್ಲಿರುವುದು ಎಂದು ಕೈಚೆಲ್ಲಿ ಕುಳಿತುಬಿಟ್ಟಿದ್ದಾನೆ.  ನಾವು ಬದಲಾವಣೆ ಅಗಲಿ ಎಂದು ಬಯಸುತ್ತೇವೆ ಹೊರತು ಆ ಬದಲಾವಣೆ ನನ್ನಿಂದಲೇ ಆಗಲಿ ಎಂದು ಏಕೆ ಯೋಚಿಸದೆ, ಅದಕ್ಕೆ ಪ್ರಯತ್ನವೂ ಪಡದೆ....ಪ್ರಯತ್ನ ಪಟ್ಟವರನ್ನು ಅವರ ಪಾಡಿಗೆ ಬಿಡದೆ ಟೀಕಿಸುತ್ತಾ ಇರುತ್ತೇವೆ.
ಬದಲಾವಣೆ ಜಗದ ನಿಯಮ ಅನ್ನೋ ಮಾತಿದೆ, ಜಗತ್ತು ಬದಲಾಗುತ್ತಿದೆಯೋ ಇಲ್ಲ ಮನುಷ್ಯ ಬದಲಾಗುತ್ತಿದ್ದಾನೋ ಎರಡು ಗೊಂದಲ...ಜಗತ್ತು...ಕಾಲ ಬದಲಾದರು ಯಾವಾಗಲು ನಮ್ಮ ಬೇಡಿಕೆಗಳು ಯಾಕೆ ಬದಲಾಗುವುದಿಲ್ಲ...ಯಾವಾಗಲು ಸುಖವಾಗಿರಬೇಕು...ಹಣ ಸಂಪಾದಿಸಬೇಕು...ಇವೆಲ್ಲವನ್ನೂ ಬಿಟ್ಟು ಒಂದು ಸುಂದರ  ಅರ್ಥಪೂರ್ಣ ಬದುಕು ನಡೆಸಲು ಮುಂದಾಗುವುದಕ್ಕೆ ಇನ್ನು ಇಂಥಹ ಅದೆಷ್ಟು ವರ್ಷಗಳು ಸರಿಯಬೇಕೋ.....???
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.....೨೦೧೨ ನಿಮ್ಮಲ್ಲರಿಗೂ ಸುಖ, ಶಾಂತಿ ನೆಮ್ಮದಿ ತರಲೆಂದು ಹಾರೈಸುತ್ತೇನೆ....ಇದೇನಪ್ಪ ಇಷ್ಟು ಹೊತ್ತು ಮನುಷ್ಯ ಸುಖ, ನೆಮ್ಮದಿ ಮಾತ್ರ ಬಯಸುತ್ತಾನೆ... ಎಂತಹ ಸ್ವಾರ್ಥ ಜೀವಿ ಮನುಷ್ಯ ಎಂದು ಹೇಳಿ ಮತ್ತೆ ಸುಖ, ಶಾಂತಿ ನೆಮ್ಮದಿ ಸಿಗಲಿ ಎಂದು ಹಾರೈಸುತ್ತಿದ್ದೇನೆ ಎಂದು ಕೇಳಬೇಡಿ....ಹಾರೈಸುವುದೊಂದೇ  ನಮ್ಮ ಕೈಲಿರುವುದು ಅಲ್ಲವೇ???

1 comment:

  1. Great savi,

    U wrote these line? if yes, every one will say u have good knowledge on social activities.

    ReplyDelete