ಪುಟಗಳು

11 November 2010

ಎತ್ತ ಸಾಗುತ್ತಿದೆ ನಮ್ಮ ಸಮಾಜ???

ಇಂದು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇಲ್ಲಿನ ಪ್ರತಿಯೊಬ್ಬ ಪ್ರಜೆಯನ್ನು ಬೆಚ್ಚಿ ಬೀಳಿಸಿದೆ. ಎಲ್ಲೆಲ್ಲು ಅನ್ಯಾಯ, ಅಕ್ರಮ, ಮೋಸವೆ ತುಂಬಿ ಹೋಗಿದೆ. ಅಸಲಿಗೆ ಸಮಾಜಕ್ಕೆ ಬೇಕಾಗಿರುವುದದರು ಏನು? ಮನುಷ್ಯ-ಮನುಷ್ಯರ ನಡುವೆ ನಂಬಿಕೆ ಕಳೆದುಕೊಳ್ಳುತ್ತಿದ್ದಾನೆ. ನಮ್ಮ ಸಮಾಜ ಸಾಗುತ್ತಿರುವುದದಾರು ಎತ್ತ ಕಡೆಗೆ?? ಮಾನವನ ನೈತಿಕತೆ ಅಧೋಗತಿಗೆ  ಇಳಿದೆದೆ.. ನಂಬಿಕೆ ಎಂಬ ಪದದ ಅರ್ಥವನ್ನು ಮರೆತಂತೆ ವರ್ತಿಸುತ್ತಿದ್ದೇವೆ...ಅದರಲ್ಲೂ ನಮ್ಮ ರಾಜಕೀಯ ಪಕ್ಷದ ನಾಯಕರಂತೂ....ಹೇಳುವುದೇ ಬೇಡ....ಗಾಳಿ ಬಂದಾಗ ತುರಿಕೋ ಎಂಬ ಗಾದೆಯನ್ನು ಅವಕಾಶ ಸಿಕ್ಕಾಗ ಸಿಕಷ್ಟು ಕೋಟಿ ದೋಚಿಕೊ ಎಂಬಂತಾಗಿದೆ....ನಾವು ಬದುಕುತ್ತಿರುವುದು ಸಮಾಜದಲ್ಲಿ "ನಮ್ಮ ಕುಟುಂಬ" ಎಂದಾಗ ಬರುವ ನಮದೆಂಬ ಭಾವನೆ, ಪ್ರೀತಿ, ಕಾಳಜಿ ನಮ್ಮ ಸಮಾಜ ಎನ್ನುವಾಗ ಏಕೆ ಇರುವುದಿಲ್ಲ..ಯಾವಾಗಲು ನಮಗೆ ಏನು ಸಿಗುತ್ತದೆ ಎಂದೂ ಯೋಚಿಸುವಾಗ ನಾವು ಬದುಕುತ್ತಿರುವ ಸಮಾಜಕ್ಕೆ ನಾವು ಮಾಡುತ್ತಿರುವುದಾದರೂ ಏನು??

ಗಬ್ಬು ನಾರುತ್ತಿರುವ ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ಇಂದು ಬೀದಿ ಬೀದಿಗಳಲ್ಲಿ ಹಾಸ್ಯಾಸ್ಪದವಾಗಿ ಮಾತನಾಡುತ್ತಿರುವುದನ್ನು ಎಷ್ಟೋ ಬರೀ ಕಂಡಿದ್ದೇನೆ..ಅದರಲ್ಲೂ ಇತ್ತೀಚಿಗೆ ಅದು ಹೆಚ್ಚಾಗಿಯೇ ಹೋಗಿದೆ. ನಾವು ನಮ್ಮನ್ನು ಆಳುತ್ತಿರುವ ನಾಯಕರನ್ನು ಜೋಕರ್ ಗಳೆಂದು ತಿಳಿದು ನಗುತ್ತಿದ್ದೆವೋ?? ಇಲ್ಲ ನಮ್ಮ ಕೈನಲ್ಲಿ ಏನು ಮಾಡಲಗದೆಂದು ಅಸಹಾಯಕತೆ ಇಂದ ನಗುತ್ತಿದ್ದೆವೋ ತಿಳಿಯದಾಗಿದೆ. ಸಮಾಜದಲ್ಲಿ ಬುದ್ದಿಜೀವಿಗಳೆನಿಸಿಕೊಂಡವರು ಮಾಡುತ್ತಿರುವುದಾದರೂ ಏನು?? ಎಲ್ಲವು ಸರಿ ಇದ್ದಾಗ ಕೊಂಕು ತೆಗೆಯುವ, ಏನು ಸರಿ ಇಲ್ಲದಿದ್ದಾಗ ಸುಮ್ಮನಿರುವ ಎಲ್ಲಿಗೆ ಹೋಗಿದ್ದಾರೆ?? ನಾವು ಚಿಕ್ಕವರಿದ್ದಾಗ ನಮ್ಮ ತಂದೆ-ತಾಯಿ, ಗುರುಗಳು, ನಮಗೆ ಗಾಂಧೀಜಿ, ನೆಹರು, ಬೋಸ್, ವಿಶ್ವೇಶ್ವರಯ್ಯ ಮುಂತಾದವರ ಜೀವನ-ಸಾದನೆಗಳ ಬಗ್ಗೆ ಹೇಳಿ ತಿಳಿಸುತ್ತಿದ್ದರು. ಆದರೆ ನಮ್ಮ ಮುಂದಿನ ಪೀಳಿಗೆಗೆ ಇಂಥಹ ಮಹಾನ್ ವ್ಯಕಿಗಳ ಬಗ್ಗೆ ತಿಳಿಸುವುದನ್ನು ಬಿಟ್ಟು ಹೀನ ರಾಜಕೀಯ ನಡೆಸುತ್ತಿರುವ, ನಮ್ಮ ರಾಜಕೀಯ ಮಹಾನ್ ನಾಯಕರೆಂದು ಕರೆಸಿಕೊಳ್ಳುವ      (ಸ್ವ)ತಂತ್ರ ವ್ಯಕಿಗಳ ಬಗ್ಗೆ ತಿಳಿಸಿ ಕೊಡುವ ಕಾಲ ಬಂದರು ಬರಬಹುದು... ಗಾಂಧಿ, ನೆಹರು ಮುಂತಾದವರ ಬಗ್ಗೆ ಹೇಳುವಾಗ ಇರುವ ಹೆಮ್ಮೆ, ಪ್ರತಿಷ್ಠೆ, ಗೌರವ, ದೇಶ ಭಕ್ತಿ ಮತ್ತು ಇವರು ನಮ್ಮವರೆಂಬ ಭಾವನೆ ಇರುತ್ತದೆ. ಆದರೆ ನಮ್ಮ ಇಂದಿನ ನಾಯಕರ ಬಗ್ಗೆ ಹೇಳುವಾಗ ನಮ್ಮ ಬಗ್ಗೆ ನಮಗೆ ನಾಚಿಕೆ ಎನಿಸಿ, ಏನು ಮಾಡಲಾಗದ ಅಸಹಾಯಕ ಪರಿಸ್ಥಿತಿಯ ಬಗ್ಗೆ ವಿವರಿಸಬೇಕಗುತ್ತದೆ.

ಇಂದು ಸಹ ಅದೆಷ್ಟೋ ಸಂಖ್ಯೆಯಲ್ಲಿ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗದೆ ಬಾಲ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಆದರೆ ನಮ್ಮ (ಅ )ನಾಯಕರು ಪಕ್ಷದಿಂದ ಪಕ್ಷಕ್ಕೆ ಹಾರಲು ಕೋಟಿಗಟ್ಟಲೆ ಹಣ ತೆಗೆದುಕೊಳ್ಳುತ್ತಿದ್ದಾರೆ. ತಲೆ ಬುರುಡೆ ಸೀಳಿದರು ಎರಡಕ್ಷರವಿಲ್ಲದ, ನಾಗರಿಕತೆ ತಿಳಿಯದ, ಸಭೆ-ಸಮಾರಂಭಗಳಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕೆಂದು ತಿಳಿಯದ, ಬಟ್ಟೆ ಹರಿದುಕೊಂಡು ಪ್ರಾಣಿಗಳಂತೆ ಅಧಿಕಾರಕ್ಕಾಗಿ ಕೂಗಾಡುವ ಇವರು ನಮ್ಮ ನಾಯಕರು....ಇವರಿಗೆ ಬೇಕಾಗಿರುವುದು ದುಡ್ಡು ಸಂಪಾದನೆ ಮಾತ್ರ. BA, MA, Ph.D...ಶಿಕ್ಷಣ ಪಡೆದು 15-20 ಸಾವಿರ ಸಂಬಳ ಪಡೆಯುವವರ ಮಧ್ಯೆ ಶಿಕ್ಷಣದ ಮೂಲ ಧ್ಯೇಯವೇ ತಿಳಿಯದ ಇಂಥವರು, ಪೂರ್ವಿಕರು ಮಾಡಿಟ್ಟ ಆಸ್ತಿ ಖರ್ಚು ಮಾಡುತ್ತ ಚುನಾವಣೆಗಳಲ್ಲಿ ಗೆದ್ದು ಖರ್ಚು ಮಾಡಿದ ಹತ್ತರಷ್ಟು ಸಂಪಾದಿಸುವ ಇವರ ಮಧ್ಯೆ ವಿಧ್ಯೆ, ವಿದ್ಯಾವಂತರಿಗೆ ಇರುವ ಮೌಲ್ಯವಾದರೂ ಏನು?? ನಮ್ಮ ಯುವ ಸಮುದಾಯ ಮಾಡುತ್ತಿರುವುದಾದರೂ ಏನು? ತಿಂಗಳಿಗೊಮ್ಮೆ ಸಂಬಳ ಪಡೆದು ತಮ್ಮ ಮನೆ ಕಷ್ಟ-ಸುಖಗಳಿಗೆ ಸ್ಪಂದಿಸಿದರೆ ಸಾಕೆ? ಹೇಗೆ ಮಾಡುವ ನಮಗೂ ಬ್ರಷ್ಟ ರಾಜಕಾರಣಿಗಳಿಗೂ ಇರುವ ವ್ಯತ್ಯಾಸ ವಾದರೂ ಏನು? ನಮ್ಮ ನಾಯಕರ ಆಸ್ತಿಯ ಬೆಲೆ ಕೋಟಿಗಟ್ಟಲೆ ಇದೆ. ಆದರೆ ಅಂದು ಸ್ವಾತಂತ್ರಕ್ಕಾಗಿ ಹೋರಾಡಿದವರ bank balance ಎಷ್ಟಿತ್ತು? ಅವರ ಬಳಿ ಇದ್ದ ಕಾರುಗಳೆಷ್ಟು? ಮನೆಗಳೆಷ್ಟು? ಚಿನ್ನ ಎಷ್ಟು? ಇಂದು ಜನರಿಗಾಗಿ ಏನು ಮಾಡದೇ ಇರುವ ಒಬ್ಬ MLA, MP ಯ ಬಳಿ ಇರುವ ಆಸ್ತಿ ಎಷ್ಟು ?? ರಾಜಕೀಯ ರಂಗ ಇಂದು ಸಮಾಜಸೇವೆಗಲ್ಲ ಬದಲಿಗೆ ಸ್ವ ಸೇವೆಗಿದೆ..
ರಾಜ್ಯದ ಹಲವು ಕಡೆ ಸಮಸ್ಯೆಗಳು ತುಂಬಿ ತುಳುಕಾಡುತ್ತಿದೆ. ಹಾಸನದಲ್ಲಿ ಆಲೂಗೆಡ್ಡೆ ಬೆಳೆದ ರೈತನಿಗೆ ಸರಿಯಾದ ಬೆಲೆ ಸಿಗದೇ ಕಂಗಲಾಗಿದ್ದಾನೆ, ಬಳ್ಳಾರಿಯಲ್ಲಿ ಮಲೇರಿಯಾದಿಂದ ಜನ ಸಾಯುತ್ತಿದ್ದಾರೆ, ಹಾವೇರಿಯಲ್ಲಿ ಬೆಳೆ ಬೆಳೆದ ರೈತ ಆತ್ಮಹತ್ಯೆಗೆ ಶರಣಗುತ್ತಿದ್ದಾನೆ, ಮೊನ್ನೆ ಮೊನ್ನೆಯಷ್ಟೇ ಸಂಭವಿಸಿದ ಜಲ್  ಚಂಡಮಾರುತದಿಂದಾಗಿ  ಅದೆಷ್ಟೋ ಜನರು ಮನೆ ಕಳೆದು ಕೊಂದು ಬೀದಿಗೆ ಬಿದ್ದಿದ್ದಾರೆ, ಇಂತಹ ವೇಳೆಯಲ್ಲಿ ಒಬ್ಬ ಜವಾಬ್ಧಾರಿಯುತ ಮುಖ್ಯಮಂತ್ರಿಯಾಗಿ ಭಾಗ್ಯಲಕ್ಷ್ಮಿ ಯೋಜನೆಯಡಿ ತಾಯಂದಿರಿಗೆ ಸೀರೆ ವಿತರಿಸಲು CM ಹೋಗಬೇಕೆ ?? ಹಾಗೆ ಹೋಗಲು ಮಾಡುವ ಖರ್ಚು-ವೆಚ್ಚ ಎಷ್ಟು... ಸೀರೆ ವಿತರಿಸಲು ಅಲ್ಲಿನ ಅಧಿಕಾರಿಗಳು ನಿರಾಕರಿಸುವರೆ? ಇಲ್ಲ ತಾಯಂದಿರು CM  ಬಂದೆ ನೀಡಲಿ ಎಂದೂ ಹಠ ಹಿಡಿದಿದ್ದರೆಯೇ?? ಪ್ರಜ್ಞಾವಂತ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳದ ಹೊರತು ನಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಸಿಗದು....ಇದು ನನ್ನ ವಯುಕ್ತಿಕ ನಿಲುವು......

08 November 2010

ಭಾವನೆಗಳ ಸುಳಿಯಲ್ಲಿ ನಾನು...!!!

ಮಾನವ ಭಾವನಾಜೀವಿ ಎಂದು ಎಲ್ಲರು ಹೇಳುವುದು ಸರ್ವೇ ಸಾಮಾನ್ಯ ಮಾತು..ಅದರಲ್ಲಿಯೂ ನನಗೆ ಅತೀ ಭಾವುಕತೆ ಎಂಬುದು ಆ ದೇವರು ನನಗೆ ಕೊಟ್ಟಿರುವ ವರವೋ ಅಥವಾ ಶಾಪವೋ ನನಗೆ ತಿಳಿದಿಲ್ಲ...ನನಗೆ ಅತಿ ಸಂತೋಷವಾದರೂ ಇಲ್ಲ ಆತಿ ದುಃಖವಾದರೂ ನನ್ನ ಮೊದಲ ಪ್ರತಿಕ್ರಿಯೆ ಕಣ್ಣು ಮುಚ್ಚಿ ಅತ್ತುಬಿಡುವುದು.....ಆಫೀಸ್ ಕೆಲಸದ ನಿಮಿತ್ತ ಕೊಡಗಿಗೆ ಹೋಗಿ ಅಲ್ಲಿ ಕೆಲ ದಿನಗಳನ್ನು ಕಳೆದ ನಾನು ಅಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ಹೇಳುತ್ತಿದ್ದೇನೆ....

ನಾನು ಮತ್ತು ನನ್ನ ಸಹೋದ್ಯೋಗಿ  ಇಬ್ಬರು ಕೊಡಗಿನಲ್ಲಿ ಉಳಿದುಕೊಳ್ಳಲು ಹೋಟೆಲ್ ರೂಂ ಬೇಕೆಂದು ಹೇಳಿದಾಗ ನನ್ನ ಪರಿಚಯವೇ ಇಲ್ಲದ, ನನ್ನ ಮುಖವನ್ನೇ ನೋಡದ ವ್ಯಕ್ತಿಯೊಬ್ಬರು ನಮಗೆ ಕುಶಾಲನಗರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟರು...ಅವರ ಹೆಸರು ಮಂಜೇಶ್, ಅವರು ಹುಟ್ಟಿ ಬೆಳೆದಿದ್ದೆಲ್ಲ ಕುಶಾಲನಗರದಲ್ಲಿಯೇ....ನಾನು ಅತಿ ಹೆಚ್ಚು ಗೌರವಿಸುವ ಶಿಕ್ಷಕ ವೃತ್ತಿ ಮಾಡುತ್ತಿದ್ದಾರೆ. 24/10/10 ಭಾನುವಾರ ಬೆಂಗಳೂರಿನಿಂದ ಹೋರಾಟ ನಮಗೆ ನಿರಂತರ ಸಂಪರ್ಕದಲ್ಲಿದ್ದು ನಾನು ಹೋಟೆಲ್ ತಲುಪುವವರೆಗೂ ಫೋನ್ ಮಾಡುತ್ತ ನಾವೆಲ್ಲಿದ್ದೇವೆ..ಅಲ್ಲಿಂದ ಯಾವ ಮಾರ್ಗವಾಗಿ, ಹೇಗೆ ಬರಬೇಕೆಂದು ತಿಳಿಸುತ್ತಿದ್ದರು...ಅಂತೆಯೇ ನಾವು ಹೋಟೆಲ್ ತಲುಪಿದ ಮೇಲೆ ನಮ್ಮ ಟೂರ್ ಪ್ಲಾನ್ ಏನೆಂದು ಕೇಳಿ ಪ್ರತಿದಿನ ಬೆಳಿಗ್ಗೆ ಫೋನ್ ಮಾಡಿ ನಾವು ತಲುಪಬೇಕಾದ ಮಾರ್ಗಕ್ಕೆ ಹೇಗೆ ತಲುಪಿದರೆ ಸೂಕ್ತ ಎಂದು ತಿಳಿಸುತ್ತಿದ್ದರು...ನಾನು ಬಂದು ಆರು ದಿನಗಳು ಕಳೆದರು ಕೆಲಸ ಒತ್ತಡದಲ್ಲಿ ಅವರನ್ನು ಭೇಟಿಮಾಡಲು ನನಗೆ ಸಮಯ ಸಿಕ್ಕಿರಲಿಲ್ಲ...ಆದರೆ ಶುಕ್ರವಾರ 29/10/10 ರಂದು ಮಂಜೇಶ ಅವರು ಬೆಳಿಗ್ಗೆ ಸುಮಾರು 10.30 ಕ್ಕೆ ಫೋನ್ ಮಾಡಿ ತಮ್ಮ ಹೆಂಡತಿಯನ್ನು ಹೆರಿಗೆಗಾಗಿ ಗೋಣಿಕೊಪ್ಪಲಿನ ಸರ್ಕಾರೀ ಆಸ್ಪತ್ರೆಗೆ ಸೇರಿಸಿರುವುದಾಗಿ ಎಂದು ಹೇಳಿದರು ನಾನು ಕೂಡ ಅದೇ ಸ್ಥಳಕ್ಕೆ ಹೋಗುತ್ತಿದ್ದೆ...ನಾನು ಅಲ್ಲಿಯೇ ನಿಮ್ಮನ್ನು ಬಂದು ಕಾಣುವುದಾಗಿ ಅವರಿಗೆ ತಿಳಿಸಿದೆ ಅದಕ್ಕೆ ಅವರು ನಿಮ್ಮ ಕೆಲಸ ಮುಗಿಸಿ ಬನ್ನಿ ಎಂದರು..ಸರಿ ಎಂದು ಸುಮಾರು 2.30 ಕ್ಕೆ ನನ್ನ ಕೆಲಸವನೆಲ್ಲ ಮುಗಿಸಿ ಅವರನ್ನು ಕಾಣಲು ಹೋದೆ..ಆಸ್ಪತ್ರೆ ಪ್ರವೇಶಿಸಿದ ನನಗೆ ಎದುರಿಗೆ ಕಂಡೆ ಅವರನ್ನು ಗುರುತಿಸಲು ಕಷ್ಟ ಆಗಲಿಲ್ಲ ಕಾರಣ ಒಂದು ಅವರ ದ್ವನಿ ಪರಿಚಯ ಮತ್ತೊಂದು ಅವರ ಮುಖದ ಮೇಲಿದ್ದ ಆತಂಕ ಮತ್ತು ಕಾತರತೆ...ನಾನು ತಂದಿದ್ದ ಹಣ್ಣಿನ ಚೀಲವನ್ನು ಅವರ ಕೈಗೆ ಕೊಟ್ಟು ನಿಮ್ಮ ಹೆಂಡತಿ ಎಲ್ಲಿ ಎಂದೆ.. ಈಗ ತಾನೆ ನೋವು ಕಾಣಿಸಿಕೊಂಡಿತು ಒಳಗೆ ಇದ್ದರೆ ಎಂದು ಹೇಳಿ ಇಬ್ಬರು ಒಳಗೆ ಹೋದೆವು..ಅಲ್ಲಿ ಮಂಜೇಶ್ ಅವರ ಅತ್ತೆ ಸ್ವಲ್ಪ ಗಾಬರಿಯಿಂದ ತಮ್ಮ ಮಗಳನ್ನು ಓಡಾಡಿಸುತ್ತಿದ್ದರು.. ನನ್ನ ಪರಿಚಯವಾದ ಮೇಲೆ ಅವರನ್ನು ನಾನೇ ಕೈ ಹಿಡಿದು ಓಡಾಡಿಸುತ್ತಿದ್ದೆ... ಆಕೆ ಅತಿಯಾದ ನೋವಿನಿಂದ ನರಳುವುದನ್ನು ಕಂಡು ನಾನು ಗಾಬರಿಯಾದೆ...ನಾನು ಹೆಣ್ಣಲ್ಲವೇ....??? ಕೊನೆಗೆ ನಡೆಯಲು ಆಗದೇ ಇದ್ದಾಗ ನುರ್ಸೆ ಬಂದು labour ward ಗೆ ಕರೆದು ಕೊಂದು ಹೋದರು.. ಅಲ್ಲಿದ್ದ ಮಂಜೇಶ್, ಅವರ ಅತ್ತೆ ಮತ್ತು ನಾನು..ಎಲ್ಲರ ಮುಖದಲ್ಲಿಯೂ ಗಾಬರಿ.....ಇತ್ತಿಚೆಗೆಷ್ಟೆ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿ ಓದಿ ಅಲ್ಲಿ ಹೇಳುವ ಅಜ್ಜಿಯ ಮಾತುಗಳಿಂದ ಪ್ರಭಾವಿಥಳಗಿದ್ದ ನಾನು ಅಂದಿನಿಂದ ದೇವರ ಮುಂದೆ ನಿಂತು ನನಗೆ ಅದು ಕೊಡು...ಇದು ಕೊಡು ಎಂದು ಕೇಳುವುದನ್ನು ಬಿಟ್ಟುಬಿಟ್ಟಿದ್ದೆ. ಆದರೆ ಮಂಜೇಶ ಅವರ ಪತ್ನಿ ಅನುಭವಿಸುತ್ತಿದ್ದ ನೋವನ್ನು ನೋಡಿ...ಅಳು ಬರುವಂತಾಗಿ ದೇವರನ್ನು ಪ್ರಾರ್ಥಿಸಿದೆ. ನನ್ನನ್ನು ನೋಡಿ ಮಂಜೇಶ್ ನೀವು ಮೊದಲ ಬಾರಿಗೆ ಇದನೆಲ್ಲ ನೋಡುತ್ತಿದ್ದೀರ ಎಂದು ಕೇಳಿದರೂ..ನಾನು ಹೌದು ನಾನು ಚಿಕ್ಕವಳಿದ್ದಾಗಲೇ ನನ್ನ ಅಣ್ಣಂದಿರು ಮತ್ತು ಅಕ್ಕನಿಗೆ ಮದುವೆಯಾಗಿದ್ದು ಇಂಥಹ ಸಂದರ್ಭ ಎದುರಿಸುತ್ತಿರುವುದು ಇದೆ ಮೊದಲಿಗೆ ಎಂದೆ...ಅದೇನೇ ಇದ್ದರು ನನ್ನ ಬಗ್ಗೆ ಹೆಚ್ಚೇನೂ ತಿಳಿಯದೆ ಇದ್ದರು ಕೇವಲ ಕೆಲ ಕ್ಷಣಗಳ ಪರಿಚಯದ ಮೂಲಕ ನಾನು ಕೂಡ ಅವರ ಮನೆಯವರಲ್ಲಿ ಒಬ್ಬಳಾಗಿಬಿಟ್ಟೆ ಎನಿಸಿತು...ಹೆರಿಗೆ ಅದ ನಂತರ ಮಗುವನ್ನು ಅವರ ತಾಯಿಯ ಕೈಗೆ ಕೊಟ್ಟರು. ನನಗೆ ಅತೀ ಆಶ್ಚರ್ಯ ಎನಿಸಿದ್ದು ಮಗುವನ್ನು ನೋಡಿದ ಕೂಡಲೇ ಮಂಜೇಶ್ ಅದು ಗಂಡು ಮಗುವೋ ಅಥವ ಹೆಣ್ಣೋ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಅತೀ ಭಾವುಕರಾಗಿ ಮಗುವನ್ನು ನೋಡುತ್ತಿದ್ದ ಪರಿ...ಆದರೆ ಅವರ ಅತ್ತೆ ಮಾತ್ರ ಮಗು ಕೈಸೇರಿದ ಕೂಡಲೇ ಅಲ್ಲಿಯೇ ಕೆಳಗೆ ಕೂತು ಅವಸವಸರವಾಗಿ ನೋಡಿ ಮಗು ಗಂಡು ಎಂದು ಬಿಟ್ಟರು ಆದರೆ ಸ್ವಲ್ಪ ಸಮಯದ ನಂತರ ತಿಳಿದುದು ಅದು ಹೆಣ್ಣು ಮಗುವೆಂದು ಆದರೆ ಹೆಣ್ಣು ಮಗು ಎಂದಾಕ್ಷಣ ಯಾವುದೇ ನಿರಾಸೆ ಭಾವ ತೋರದೆ ತಂದೆಯಾದನೆಂಬ ತೃಪ್ತ ಭಾವ ಮಂಜೇಶ ಅವರ ಮುಖದಲ್ಲಿ ಎದ್ದು ಕಾಣಿಸುತ್ತಿತ್ತು...ಅಲ್ಲಿಂದ ಹೊರಬಂದ ನಾನು ಬಸ್ಸಿನಲ್ಲಿ ಕೂತು ಯೋಚಿಸುತ್ತಿದ್ದೆ...ಯಾರಿಗಾದರೂ ಸಹಾಯ ಮಾಡಬೇಕಾದ ಸಂದರ್ಭ ಬಂದಾಗ ಅನೇಕರು ಅಯ್ಯೋ ನನಗೆ ಆರೋಗ್ಯ ಸರಿ ಇಲ್ಲ...ನಾನು ಕೂಡ ಊರಿನಲ್ಲಿ ಇರುವುದಿಲ್ಲ...ಹೇಗೆ ಅನೇಕ ಕಾರಣ ಕೊಡುವ ಜನರು ನಮ್ಮಲ್ಲಿ ಅನೇಕರಿದ್ದಾರೆ...ಆದರೆ ತಮ್ಮ ಹೆಂಡತಿಯನ್ನು ಹೆರಿಗೆಗೆ ಸೇರಿಸಿದ ನಂತರವೂ ನನಗೆ ಫೋನ್ ಮಾಡಿ ನಮ್ಮನ್ನು ವಿಚಾರಿಸುತ್ತಿದ್ದ ಜೊತೆಗೆ ನನ್ನು ಆಸ್ಪತ್ರೆ ಯಿಂದ ಹೊರ ಬಂದ ಮೇಲೂ ಅಲ್ಲಿನ ಆತಂಕದ ವಾತಾವರಣದಲ್ಲಿಯೂ ನನ್ನ ಮತ್ತು ನನಗೆ ಬಸ್ ಸಿಕ್ಕಿತ...ಇಲ್ಲವೆಂದು....ಕೇಳಿ ತಿಳಿಯುತ್ತಿದ್ದ ಅವರ ಮೇಲೆ ನನಗೇನೋ ಅತ್ಹ್ಮಿಯ ಭಾವ ಮೂಡಿತ್ತು...ನನಗೆ ಪ್ರತಿ ಹೆಜ್ಜೆಯಲ್ಲಿಯೂ ಸಹಾಯ ಮಾಡಿದ ಮಂಜೇಶ್ ಅಂಥವರು ಸಮಾಜಕ್ಕೆ ಅಗತ್ಯವಾಗಿ ಬೇಕು...ಹೇಗೆ ಅವರ ಸಹಾಯ ಮನೋಭಾವ ಮುಂದುವರೆಯಲೆಂದು ನನ್ನ ಹಾರೈಕೆ ಮತ್ತು ಅವರ ಈ ದೊಡ್ಡಗುಣಕ್ಕೆ ನನ್ನ ಸಣ್ಣ ಕೃತಜ್ಞತೆ....

ಇದರ ನಂತರ ನನ್ನನ್ನು ಭಾವುಕಳಗುವಂತೆ ಮಾಡಿದ ಇನ್ನೊಂದು ಘಟನೆ..ಪ್ರತಿ ದಿನ ನಾನು ಉಟಕ್ಕೆ ಹೋಗುತ್ತಿದ್ದ ಹೋಟೆಲ್ ನಲ್ಲಿ cleaning ಕೆಲಸ ಮಾಡುತ್ತಿದ್ದ ಸುಮಾರು 75-80 ವರ್ಷದ ವೃದ್ದ... ಅವರನ್ನು ನೋಡಿದ ವೇಳೆ ಊಟ ಮಾಡಲು ನನ್ನಿಂದ ಆಗುತ್ತಿರಲಿಲ್ಲ..ನಾನು ಬಹಳಷ್ಟು ಹೋಟೆಲ್ ಗಳಲ್ಲಿ ಇದನ್ನು ನೋಡಿದ್ದೇನೆ. ವಯಸ್ಸಾದ ಹಿರಿಯರು ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ನೋಡಿದ ಕೂಡಲೇ ನನಗೆ ಅನ್ನಿಸಿದ್ದು ಅಯ್ಯೋ ಪಾಪ ಎಷ್ಟು ವಯಸ್ಸಾಗಿದೆ ಆದರೂ ಕೆಲಸ ಮಾಡುತ್ತಿದ್ದಾರೆ ಇವರಿಗೆ ಯಾರು ಇಲ್ಲವೇ ? ಇದ್ದರೆ  ಏಕೆ ವಯಸ್ಸಾದ ತಂದೆ-ತಾಯಿಯರನ್ನು ನೋಡಿಕೊಳ್ಳದೆ ಏಕೆ ಬೀದಿಗೆ ತಳ್ಳುತ್ತಾರೆ ಎಂದು ಅವರಿಗೆ ಶಾಪ ಹಾಕುವುದೇನೋ ಖಚಿತ...ಅದಾರು ಹೀಗೆ ಬೀದಿಗೆ ಬಿದ್ದ ವಯಸ್ಸಾದವರಿಗೆ ಹೋಟೆಲ್ ನವರು ಕೆಲಸ ಕೊಟ್ಟು ತಮ್ಮ ಅನ್ನವನ್ನು ತಾವೇ ಸಂಪಾದಿಸಿ ಕೊಂದು ತಿನ್ನಿವಂತೆ ಮಾಡಿದ್ದರೆ ಅಂದುಕೊಂಡು ಅಕಸ್ಮಾತ್ ಇವರಿಗೆ ಇಲ್ಲಿ ಕೆಲಸ ಇಲ್ಲ ಎಂದಾದರೆ ಅವರ ಪಾಡು ಏನು? ಬಿಕ್ಷೆ ಬೇಡುವುದು ಇಲ್ಲ ಹಸಿವಿನಿಂದ ಬೀದಿ ಹೆಣವಾಗಿ ಹೋಗುವುದು...ಅವರನ್ನು ನಿತ್ಯ ನೋಡುತ್ತಿದ್ದ ನಾನು ಒಂದು ದಿನ ನಿಮಗೆ ಮಕ್ಕಳು ಇಲ್ಲವೇ ಎಂದು ಕೇಳಿಯೇ ಬಿಟ್ಟೆ ಅದಕ್ಕೆ ಆತ ಇದ್ದರೆ ಇಂದು ಹೇಳಿ ಅವರ ಮಕ್ಕಳನ್ನು ದೂರುವುದಗಲಿ....ಶಪಿಸುವುದಗಲಿ ಮಾಡಲಿಲ್ಲ...ಸರಿ ಇಂದು ಅವರಿಗೆ ಹತ್ತು ರೂಪಾಯಿ ಕೊಟ್ಟು ಅಲ್ಲಿಂದ ಎದ್ದು ಬಂದೆ.....

ನಾನು ಕೊಟ್ಟ ಹತ್ತು ರೂಪಾಯಿ ಕೇವಲ ಒಂದು ಕಾಫೀ ಕುಡಿದರೆ ಕಾಲಿಯಗುವುದು. ಹೆತ್ತ ಮಕ್ಕಳಿದ್ದರು ಹೇಗೆ ವಯಸ್ಸಾದ ಕಾಲದಲ್ಲಿ ದುಡಿದು ತಿನ್ನುವ ಇಂತಹವರಿಗೆ ಶಾಶ್ವತ ಪರಿಹಾರ ಏನು?? ಹೆತ್ತವರಿಗೆ ಸ್ವರ್ಗ ಸುಖ ನೀಡುವುದು ಬೇಡ ಕೊನೆಪಕ್ಷ ಅವರಿಗೆ ತಿನ್ನಲು ಎರಡು ಹೊತ್ತು ಊಟ ಹಾಕುವ ಶಕ್ತಿ ಮಕ್ಕಳಿಗೆ ಇಲ್ಲವೇ ?? ಹಾಗೆಯೆ ಕೊಡವರ ಸಂಸ್ಕೃತಿ ಅರಿಯಲು ಅಲ್ಲಿನ ಕೊಡವರ ಮನೆಗೆ ಬೀಟಿ ನೀಡುತ್ತಿದ್ದ ನನಗೆ ಎಷ್ಟೋ ವಯಸ್ಸಾದ ವ್ರುದ್ದರನ್ನು ಕಾಣುವ ಸಂದರ್ಭವು ಎದುರಾಯಿತು....ಅಲ್ಲಿಯೂ ಕೂಡ ಹೀಗೆ ಮಕ್ಕಳು ತಂದೆ-ತಾಯಿಯರನ್ನು ಒಂಟಿಯಾಗಿ ಬಿಟ್ಟು ವಿದೇಶಗಳಲ್ಲಿ, ಬೆಂಗಳೂರು, ಮಂಗಳೂರು, ...ಹೇಗೆ ಅನೇಕ ಕಡೆ ನೆಲಸಿದ್ದಾರೆ...ಎಲ್ಲಿಯೂ ಸಹ ಪೋಷಕರು ಒಂಟಿ ...ಆದರೆ....ಕೂತು ತಿನ್ನುವಷ್ಟು ಆಸ್ತಿ ಇದೆ. ಜೊತೆಗೆ ಮನೆ ಕೆಲಸಕ್ಕೆ, ಅಡುಗೆ ಮಾಡಲು ಕೆಲಸದವರು ಇರುತ್ತಾರೆ ಆದರೂ ಅವರು ಒಂಟಿ....ಇತ್ತ ಆಸ್ತಿಯು ಇಲ್ಲದ... ಮಕ್ಕಳು ತಮ್ಮ ಹೊಣೆ ಹೊರದ ಅನೇಕ ವೃದ್ದರು ನಮ್ಮ ನಡುವೆ ಇದ್ದರೆ...ಒಂದೇ ಸಮಾಜದಲ್ಲಿ ಎಷ್ಟೊಂದು ವೈವಿದ್ಯತೆ...ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವ ಸಂಭಂದಗಳ ಸ್ವರೂಪ, ಸುಖ-ದುಃಖ, ಜೀವನದ ಕಲ್ಪನೆ, ಪ್ರೀತಿ-ವಿಶ್ವಾಸ....ಅದೇನೇ ಇದ್ದರು ಮೊದಲು ನಾವು ಮಾನವರು..ಭಾವನೆಗಳೇ ನಮ್ಮ ಬದುಕು ಆದ್ರೆ ವಾಸ್ತವಾಂಶ ಬೇರೆ ಅಲ್ಲವೇ ??

ನನ್ನ ಆಯಸ್ಸು ನೂರು ವರ್ಷ ಎಂದು ಅಂದುಕೊಂಡರು ಎಗಾಗಲೇ ನಾನು 1/4 ಭಾಗ ಸುಮ್ಮನೆ ವ್ಯರ್ಥ ಮಾಡಿದ್ದೇನೆ...ನನ್ನ ಈ 26 ವರ್ಷಗಳಲ್ಲಿ ನಾನು ಯಾರಿಗೂ ಕಿಂಚಿತ್ತು ಸಹಾಯ ಮಾಡಿಲ್ಲ...ಯಾರಿಗೆ ಯಾಕೆ ಇನ್ನು ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ನನ್ನ ಜೀವನದ ಮಹತ್ವದ ಕನಸೆಂದರೆ ಕೊನೆ ಪಕ್ಷ 5-6 ಅನಾಥ ಮಕ್ಕಳನ್ನು ಸಾಕುವುದು ಇದಕ್ಕಾಗಿ ಕೆಲ ಅನಾಥ ವ್ರುದ್ದರನ್ನು ಸಾಕಿ ಆ ಮಕ್ಕಳನ್ನು ಬೆಳೆಸಲು ವೃದ್ದರ ಸಹಾಯ ಪಡೆಯುವುದು.. ಇದು ಎಷ್ಟರ ಮಟ್ಟಿಗೆ ಸಫಲವಗುವುದೆಂದು ನನಗೆ ತಿಳಿದಿಲ್ಲ ಆದರೆ ಎಲ್ಲಾ ಏರುವುದು ನಮ್ಮ ಕೈಯಲ್ಲೇ ಅಲ್ಲವೇ?? ನಿರಂತರ ಪ್ರಯತ್ನ ಅಗತ್ಯ......ನಾನು ಅದೇ ಪ್ರಯತ್ನದಲ್ಲಿದ್ದೇನೆ.......