ಪುಟಗಳು

10 October 2015

ಅರ್ಥವೋ ? ಅನರ್ಥವೋ?


ಅಹಿಂಸೆಯೇ ಪರಮಧರ್ಮ ಎಂದರು ಗಾಂಧೀಜಿ.... ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದರು ಡಿ.ವಿ.ಜಿ. ಆದರೆ ಇಂದು ಮನುಷ್ಯ ಮನುಷ್ಯನನ್ನೇ ಕೊಂದು ಬದುಕುತ್ತಿರುವ ಸ್ಥಿತಿ...ಯಾರನ್ನು ನೆಮ್ಮದಿಯಿಂದ ಬಾಳಲು ಬಿಡದೆ ಹಿಂಸೆಯನ್ನೇ ಕಾಯಕವನ್ನಾಗಿಸಿಕೊಂಡಿರುವ ಮನುಷ್ಯ..ಹಿಂಸೆಯನ್ನೇ ವೈಭವೀಕರಿಸಿ TRP ಹಿಚ್ಚಿಸಿಕೊಳ್ಳುವ ಟಿ.ವಿ ವಾಹಿನಿಗಳು..ಹಿಂದೆ ಆದಿಮಾನವರು ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸಿಕೊಂಡು ಬದುಕುತ್ತಿದ್ದರು ಎಂದು ಕೇಳಿದ್ದೇವೆ ಮತ್ತು ಪ್ರಾಣಿಗಳಿಂದ ತಮಗೆ ತೊಂದರೆ ಬರುವಾಗ ಅವುಗಳನ್ನು ಕೊಂದು ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತಿದರು ಎಂಬುದನ್ನು ಸಹ ಕೇಳಿದ್ದೇವೆ ಆದರೆ ಇಂದು ಮನುಷ್ಯ ತಾನು ಬದುಕಲು ಏನು ಬೇಕಾದರು ಮಾಡುವ ಹಂತಕ್ಕೆ ತಲುಪಿದ್ದಾನೆ...ಎಷ್ಟು ಕ್ರೂರತನ ...ಎಂತಹ ಸ್ವಾರ್ಥ...

ಇನ್ನು ರಾಜಕೀಯ ದೊಂಬರಾಟ ನೋಡುವ ಹಾಗಿಲ್ಲ ಬಿಡುವ ಹಾಗಿಲ್ಲ....ಅಪ್ಪ- ಅಮ್ಮ ಬದುಕಿರುವಾಗ ನೋಡಿಕೊಳ್ಳದ ಮಕ್ಕಳು ಅವರು ಸತ್ತ ಮೇಲೆ ಅವರಿಗೆ ಇಷ್ಟವಾದುದನೆಲ್ಲ ಎಡೆ ಇಟ್ಟು ಪಕ್ಷ ಮಾಡುವಂತೆ; ರೈತರಿಗೆ ಕಷ್ಟ ಬಂದಾಗ ನೆರವಾಗದ ಸರ್ಕಾರ ಅವರು ಸತ್ತ ಮೇಲೆ ಅವರ ಮನೆಗೆ ತೆರಳಿ ಸಾಂತ್ವನ ಹೇಳುವ ಸರ್ಕಾರವಾಗಿದೆ...ಇನ್ನು ರೈತರ ಮನೆಗೆ ಹೋದರೆ ಅವರ ಕಣ್ಣೊರೆಸುವ ನಾಟಕ...ಇಲ್ಲವಾದರೆ ರೈತರ ನಿರ್ಲಕ್ಸ್ಯ ಎಂದು ದೂರುವ ವಿರೋಧ ಪಕ್ಷಗಳು. ಇನ್ನು ಎಷ್ಟೋ ವರ್ಷಗಳಿಂದ ಡಾಂಬರು ಕಾಣದ ರಸ್ತೆಗಳು, ಸ್ವಚತೆಯನ್ನು ಕಾಣದ ಹಳ್ಳಿ ಬೀದಿಗಳು...ಇಂದು ರಾಜಕೀಯ ಗಣ್ಯರ ಆಗಮನಕ್ಕಾಗಿ ತಯಾರಿಯಾಗಿವೆ.  ರಸ್ತೆಗಳಿಗೆ ಟಾರ್ ಹಾಕಿಸಿ...ಹಳ್ಳಿಯ ಬೀದಿ ಬೀದಿಗಳನ್ನು ಶುಚಿಗೊಳಿಸಿ, ಜೊತೆಗೆ ಪೋಲಿಸ್ ಕಾವಲು ಭದ್ರತೆಯ ದ್ರಿಷ್ಟಿಯಿಂದ...ನನಗೆ ಅನ್ನಿಸುತ್ತಿರುವುದು ಹೀಗೆ ರಾಜಕೀಯ ಗಣ್ಯರು ಬರುವ ಮಾತ್ರಕ್ಕೆ ಹಳ್ಳಿಗಳನ್ನು ಮದುವೆ ಮನೆಯಂತೆ ಅಲಂಕರಿಸುತ್ತಿರುವಾಗ ಏಕೆ ನಮ್ಮ ರಾಜಕೀಯ ಗಣ್ಯರು ತಿಂಗಳಿಗೊಮ್ಮೆ ಅಥವಾ ಆಗ್ಗಾಗ್ಗೆ ಏನೂ ಸೌಕರ್ಯ ಕಾಣಾದ ಹಳ್ಳಿಗಳಿಗೆ ಪ್ರವಾಸ ಕೈಗೊಳ್ಳಬಾರದು??? ಇದರಿಂದ ನಮ್ಮ ಹಳ್ಳಿಗಳು ಗಾಂಧೀಜೀಯವರ ಆಶಯದಂತೆ ಗ್ರಾಮ ಸ್ವರಾಜ್ಯಗಳಾಗುವ ಬದಲು ಕೊನೆ ಪಕ್ಷ ಗ್ರಾಮ ಶುಚಿತ್ವ ವಾದರೂ ಆಗಬಹುದು ಎಂಬುದು ನನ್ನ ಅನಿಸಿಕೆ...ಇದಕ್ಕೆ ನೀವೇನು ಹೇಳುತ್ತಿರಿ??

30 March 2015

ಸಂಭಳ ಭಾಗ್ಯ...ಸಿದ್ದರಾಮ್ಯನವರ ಸರ್ಕಾರದ ವರದಾನ...

ಶಾಸಕರ, ಸಚಿವರ ವೇತನದಲ್ಲಿ ಭಾರೀ ಹೆಚ್ಚಳ...ವಾಹ್ ಎಂತಹ ಸರ್ಕಾರ ನೋಡಿ... ರೈತನಂತೆ ಭೂಮಿ ಉತ್ತಲಿಲ್ಲ, ಭಿತ್ತಲಿಲ್ಲ...ಸರ್ಕಾರಿ ಕೆಲಸಗಾರರಂತೆ 10-5 ಘಂಟೆ ಆಫೀಸಿನಲ್ಲಿ ಕುಳಿತು ಕೆಲಸ ಮಾಡಲಿಲ್ಲ...ಮಹಿಳೆಯರಂತೆ ಸಮಯದ ಅಂಕೆಯೇ ಇಲ್ಲದೆ ದುಡಿಯುತ್ತಿಲ್ಲ... ಆದರೂ ನಮ್ಮ ಜನನಾಯಕರಿಗೆ ವೇತನ ಹೆಚ್ಚಳ. ಎಂತಹ ನಾಡಿನಲ್ಲಿ ಬದುಕುತ್ತಿದೇವೆ...tomato ಬೆಲೆ ಒಂದೂವರೆ ಕೆ.ಜಿ. ಗೆ 10 ರುಪಾಯಿಯಾಗಿ ಬೆಳೆದ ರೈತ ಕಣ್ಣೀರಿನಲ್ಲಿ ಅಲ್ಲಲ್ಲ tomato ರಸದಲ್ಲಿಯೇ ಕೈತೊಳೆಯುತ್ತಿದ್ದಾನೆ. ರಾಜ್ಯದಲ್ಲಿ ಮಳೆ ಇಲ್ಲದೆ ಬರ ಇಂದು ಘೋಷಣೆಯಾಗಿರುವಾಗ ಇವುರುಗಳಿಗೆ ವೇತನದಲ್ಲಿ ಹೆಚ್ಚಳ. ಚುನಾವಣಾ ವೇಳೆ ಆಸ್ತಿ ಘೋಷಣೆ ಮಾಡುವಾಗ ಕೋಟ್ಯಂತರ ರುಪಾಯಿ ಆಸ್ತಿ ಇದೆ (ತಮ್ಮ ಕುಟುಂಬ/ಗಳ ಹೆಸರಿನಲಲ್ಲೂ) ಎಂದು ತೋರಿಸುವ ಶಾಸಕರ, ಸಚಿವರು ಪಾಪ ತಮ್ಮ ತಮ್ಮ ಸರ್ಕಾರೀ ವೇತನದಲ್ಲಿಯೇ ತಮ್ಮ ಕುಟುಂಬಗಳನ್ನೂ ಸಾಕುತ್ತಿದ್ದಾರೆ. ಸದನ ನೆಡೆಯುವಾಗ ದಿನಕ್ಕೆ 1500 ಭತ್ಯೆ. ಅಬ್ಬಾ... ಸದನದ ಹಾಜರಾತಿಗೆ ಸಹಿ ಮಾಡಿ ನಿದ್ದೆ ಮಾಡುತ್ತ ಭತ್ಯೆ ಪಡೆಯುವವರು ಒಂದು ಕಡೆಯಾದರೆ, ಸಹಿ ಮಾಡಿ ಹೊರಗೆ ಹೋಗುವವರು ಇನ್ನೊದು ಕಡೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಒನ್ನುವುದಕ್ಕೆ ಇದು ಒಳ್ಳೆಯ ನಿದರ್ಶನ.

ಬ್ರಿಟೀಷರಿಗೆ ಕಪ್ಪ ಕೊಡಬೇಕಾಗಿ ಬಂದಾಗ ಗಂಡೆದೆಯ ಕಿತ್ತೂರಿನ ರಾಣಿ ಚೆನ್ನಮ್ಮ ಹೇಳಿದ ಮಾತುಗಳು ನಾವೆಲ್ಲರೂ ಎಂದು ಮರೆಯುವಂತಿಲ್ಲ...ಅದರ ಒಂದು ಚಿಕ್ಕ ಸಾಲು ‘ನೀವೇನು ರೈತರಂತೆ ಭೂಮಿ ಉತ್ತಿರೆ, ಬಿತ್ತಿರೆ ನಿಮಗೇಕೆ ಕೊಡಬೇಕು ಕಪ್ಪ’ ಎಂದು...ಇಲ್ಲಿಯೂ ಹಾಗೆ ನಮ್ಮದೇ ತೆರಿಗೆಯ ದುಡ್ಡಿನಲ್ಲಿ ನಮ್ಮನ್ನು ಸಾಲಗರರನ್ನಾಗಿ ಮಾಡಿ, ಹೆಗ್ಗಣಗಳಂತೆ ತಿಂದು ತೇಗುತ್ತಿರುವ ಶಾಸಕರ, ಸಚಿವರ, ಮುಖ್ಯಮಂತ್ರಿಗಳಿಗೂ ಸೇರಿತಂದೆ ವೇತನ ಹೆಚ್ಚಿಸಲು ಅನುಸರಿಸಿರುವ ಮಾನದಂಡಗಳು ಯಾವುದೆಂದು ಯಾರಿಗಾದರು ತಿಳಿದಿದೆಯೇ ?ಗೊತ್ತಿದ್ದರೆ ದಯವಿಟ್ಟು ತಿಳಿಸಿ...


‘ಮಾಡಿದ್ದುನ್ನೋ ಮಹರಾಯ’ ಎನ್ನುವಂತೆ ನಾವೇ ಆರಿಸಿ ಕಳುಹಿಸಿರುವ ಇವರುಗಳಿಗೆ ಒಂದು ಚೂರೂ ನೋವಾಗದಂತೆ ಇವರ ಮತ್ತು ಇವರ ಕುಟುಂಬ/ಗಳನ್ನೂ ನೋಡಿಕೊಳ್ಳುವುದು ನಮ್ಮ ಹೊಣೆ ಅಲ್ಲವೇ ಅದಕ್ಕಾಗಿ ನಮ್ಮ ತೆರಿಗೆಯ ಹಣದಿಂದ ಇವರಿಗೆ ಸಂಭಳ ಭಾಗ್ಯ ನೀಡೋಣ ....