ಪುಟಗಳು

25 November 2011

ನಾವು ಮತ್ತು ನಮ್ಮ ಸಾಮಾಜಿಕ ಜವಾಬ್ಧಾರಿ !!!



ಬಹಳ ದಿನಗಳಾಯಿತು ನನ್ನ ಬ್ಲಾಗ್ ಬರೆದು...ಏನಾದ್ರು ಬರೆಯಬೇಕೆನ್ನುವ ಹಂಬಲ ಆದರೆ ಸಮಯದ ಅಭಾವ...ಆಫೀಸ್ ಕೆಲಸ, ಪಿ.ಎಚ್ ಡಿ ಕೆಲಸಗಳ ಮದ್ಯೆ ಬರೆಯಲು ಬಿಡುವೆ ಇಲ್ಲದಂತಾಗಿದೆ, ಆದರೂ ನನ್ನ ಕೆಲ ಗೆಳೆಯರನ್ನು ನೋಡಿದರೆ ಬಹಳ ಆಶ್ಚರ್ಯ ಮತ್ತು ಸಂತೋಷವಾಗುತ್ತದೆ ಕಾರಣ ತಮ್ಮ ಕೆಲಸದ ಒತ್ತಡದಲ್ಲಿಯೂ ಅವರ ಬರವಣಿಗೆಗಳನ್ನು ಓದುವ ಭಾಗ್ಯ ನನಗೆ ಸಿಗುತ್ತಿರುತ್ತದೆ ಎಂದು...
ಅಂದ ಹಾಗೆ ವಿಷಯಕ್ಕೆ ಬರುತ್ತೇನೆ ಪ್ರತಿ ಶನಿವಾರ ನನ್ನ ಪಿ.ಎಚ್.ಡಿ ಗೈಡ್ ನೋಡಲು ಮೈಸೂರಿಗೆ ಹೊಗಿಬರುತ್ತಿರುತ್ತೇನೆ, ಹೆಚ್ಚಾಗಿ ಟ್ರೈನ್ ನಲ್ಲಿಯೇ ಪ್ರಯಾಣಿಸುತ್ತಿರುತ್ತೇನೆ. ಪ್ರತಿ ಬಾರಿ ಇಲ್ಲಿಂದ ಹೊರಡುವಾಗ ಮತ್ತು ಮೈಸೂರಿನಿಂದ ಬರುವ ನಾನು ಯೋಚಿಸುವುದು ಒಂದೇ ವಿಚಾರ...ಅದು ಟ್ರೈನ್ ನ ಸ್ವಚ್ಚತೆ ಬಗ್ಗೆ...ಹೌದು ಮೈಸೂರಿನಿಂದ ಟೈನ್ ಹತ್ತುವಾಗ ಇರುವ ಖುಷಿ ನನಗೆ ಇಳಿಯುವಾಗ ಸಿಗುವುದಿಲ್ಲ...ನಮ್ಮ ಜನರು ತಾವು ತಮ್ಮ ಉಪಯೋಗಕ್ಕಾಗಿ ಬಳಸುವ ಸಾರ್ವಜನಿಕ ವಸ್ತುಗಳನ್ನ ಏಕೆ ಇಷ್ಟು ಉಡಾಫೆತನದಿಂದ ನೋಡುತ್ತಾರೆ ಎಂದು ತಿಳಿದಿಲ್ಲ...ಟ್ರೈನ್ ಹತ್ತುವಾಗ ಅದರ ಸ್ವಚ್ಚತೆ ನೋಡಿದರೆ ನಿಜವಾಗಿಯೂ ಖುಷಿ ಎನಿಸುತ್ತದೆ ಆದರೆ ಆ ಖುಷಿ ಬಹಳ ಸಮಯ ಉಳಿಯುವುದಿಲ್ಲ...ಟ್ರೈನ್ ನಲ್ಲಿ ಮಾರಿಕೊಂಡು ಬರುವ ಹೆಚ್ಚು-ಕಡಿಮೆ ಪ್ರತಿಯೊಂದು ತಿಂಡಿ-ತಿನಿಸನ್ನು ಕೊಂಡು ತಿನ್ನುವ ಬಹಳಷ್ಟು ಜನರು ಕಸ ಎಂದು ಎನಿಸಿಕೊಳ್ಳುವ ವಸ್ತುಗಳನ್ನ ತಾವು ಕುಳಿತಲ್ಲೇ ಹಾಕುವುದನ್ನು ನೋಡಬಹುದು...ಕಡಲೆ ಕಾಯಿ ತಿಂದು ಅದರ ಸಿಪ್ಪೆಯನ್ನು ಕಾಲ ಬಳಿಯಲ್ಲಿಯೇ ಹಾಕುವುದಲ್ಲದೆ ಸಿಪ್ಪೆಗಳು ಎದುರಿಗೆ ಕುಳಿತಿರುವ ವ್ಯಕ್ತಿಯ ಪಾದಗಳನ್ನೂ ಸಹ ತೊಳೆಯುತ್ತಿರುತ್ತವೆ...ಇನ್ನು ಮದ್ದೂರ್ ವಡೆ ತಿಂದ ಪೇಪರ್, ಕಾಫಿ-ಟೀ ಕುಡಿದ ಪೇಪರ್ ಕಪ್ ಅನ್ನು ಕಿಟಕಿ ಪಕ್ಕ ಕುಳಿತವರು ಹೊರಗೆ ಹಾಕಿದರೆ ಕೆಲವರು ಏಳಲು ಕಷ್ಟ ಎನ್ನುವ ಮಟ್ಟಿಗೆ ಅದನ್ನು ಅಲ್ಲಿಯೇ ಹಾಕಿ ಬಿಡುತ್ತಾರೆ...
ಇದು ಕೆಳಗೆ ಕುಳಿತವರ ಕಥೆಯಾದರೆ ಇನ್ನು ಮೇಲೆ ಅಂದರೆ ಅಪ್ಪರ್ ಬರ್ತ ನಲ್ಲಿ ಕುಳಿತುಕೊಳ್ಳುವವರ ಕಥೆ ಕೇಳಿ..ಪಾಪ ಮೇಲೆ ಹತ್ತಿ ಕುಳಿತುಕೊಳ್ಳುವ ಕೆಲವವು ಮಹಾಶಯರಿಗೆ ತಮ್ಮ ಚಪ್ಪಲಿ-ಶೂಗಳದ್ದೇ ಚಿಂತೆ ಎಲ್ಲಿ ಕೆಳಗೆ ಬಿಟ್ಟರೆ ಯಾರದ್ರು ಕದ್ದು ಬಿಡುತ್ತಾರೋ ಎಂಬ ಭಯ ಅದಕ್ಕರಾಗಿ ಇವರು ಮೇಲೆ ಹತ್ತುವಾಗ ಚಪ್ಪಲಿ ಶೂ ಹಾಕಿ ಕೊಂಡಿಯೇ ಹತ್ತುವುದು...ಕೆಲವರು ಹತ್ತಿ ಅವಗಳನ್ನು ಬಿಚ್ಚಿ ಕಾಲುಗಳ ಹತ್ತಿರ ಇಟ್ಟುಕೊಂಡರೆ ಇನ್ನು ಕೆಲವರು ಬಿಚ್ಚದೆ ಹಾಕಿಕೊಂಡಿಯೇ ಮಲಗುತ್ತಾರೆ...ಓಡಾಡುವ ಜನರು ತಮ್ಮ ಚಪ್ಪಲಿ-ಶೂ ಕಾಲುಗಳ ದರ್ಶನ ಮಾಡಿ ಕೊಳ್ಳಲಿ ಎಂದು...ನಾವು ಇಳಿದ ಮೇಲೆ ಬೇರೊಬ್ಬರು ಇಲ್ಲಿ ಕುಳಿತುಕೊಳ್ಳಲೋ  ಇಲ್ಲ ಮಲಗಲೋ ಈ ಸೀಟ್ ಅನ್ನು ಉಪಯೋಗಿಸುತ್ತಾರೆ ಎಂಬ ಜ್ಞಾನವೇ ಇರುವುದಿಲ್ಲ.. ಇನ್ನು ಮಲಗುವ ಪರಿ ಕಾಲು ಹಾಕುವ ಜಾಗದಲ್ಲಿ ತಲೆ, ತಲೆ ಇಡುವ ಜಗದಲ್ಲಿ ಕಾಲು ಇಟ್ಟು ಮಲಗುತ್ತಾರೆ. ಪಾಪ ಇನ್ನ್ಯಾರೋ ಬಂದು ತಲೆ ಇಡುವ ಜಾಗದಲ್ಲಿ ತಲೆಯನ್ನೇ ಇಟ್ಟು ಮಲಗಿಕೊಂಡರೆ ಅಷ್ಟೇ ಇದಕ್ಕೂ ಮೊದಲು ಅಲ್ಲಿ ಕಾಲು ಇಟ್ಟು ಮಲಗಿದ್ದವನ ಪಾದದ ದೂಳಿನ ಸ್ಪರ್ಶ....ಇನ್ನು ಆಶ್ಚರ್ಯದ ವಿಚಾರ ಎಂದ ಹೆಚ್ಚು ಜನ ಇಂತಹವರಲ್ಲಿ ವಿದ್ಯಾವಂತರೇ ಆಗಿದ್ದಾರೆ...ಇದೆಲ್ಲ ದರ್ಶನದ ಅಜೋತೆಗೆ ಇಳಿಯಲು ಬಂದಾಗ ನಿಮಗೆ ನೀವು ಮೊದಲು ನೋಡಿದ ಸ್ವಚ್ಚವಾದ  ಟ್ರೈನ್ ತಿಪ್ಪೆ ಗುಂಡಿಯಂತೆ ಕಾಣುತ್ತಿರುತ್ತದೆ.
ಇದೆಷ್ಟು ಟ್ರೈನ್ ಕಥೆಯಾದರೆ ಇನ್ನು ನಮ್ಮ ಬೃಹತ್ ಬೆಂಗಳೂರಿನ ಕಥೆಯು ಅಷ್ಟೇ...ಅನೇಕ ಬಾರಿ  ಬಿ ಎಮ್ ಟಿ ಸಿ ಬಸ್ ನಲ್ಲಿ  ಪ್ರಯಾಣಿಸುವಾಗ ನಾನು ಇಂತಹ ದೃಶ್ಯಗಳನ್ನು ಕಂಡಿದ್ದೇನೆ...ಮಹಿಳೆಯರು ಬಸ್ಸಿನಲ್ಲಿಯೇ ತಾವು ಅಂದಿನ ಅಡಿಗೆಗೆಂದು  ಖರೀದಿಸಿದ ತರಕಾರಿ, ಸೊಪ್ಪನ್ನು ಸ್ವಚ್ಚಗೊಳಿಸುತ್ತ ಕೋರುವುದು...ಮೊನ್ನೆ ಕೂಡ ಇಂತಹದ್ದೇ ದೃಶ್ಯ...ಮಹಿಳೆಯೊಬ್ಬಳು ತಾನು ಕೊಂಡಿದ್ದ ಸೊಪ್ಪನ್ನು ಬಸ್ಸಿನಲ್ಲಿಯೇ ಸ್ವಚ್ಚ ಮಾಡುತ್ತಾ ಕುಳಿತಿದ್ದರು...ನಾನು ಎದುರಿಗೆ ನಿಂತಿದ್ದ ಕಾರಣ ಅವರು ನನ್ನನು ನಾನು ಅವರನ್ನು ನೋಡುತ್ತಿದ್ದೆವು, ಆಕೆ ಸೊಪ್ಪನ್ನು ಬಿಡಿಸಿ ಚೆನ್ನಾಗಿರುವುದನ್ನು ಕವರ್ ಗೆ ಹಾಕಿ ಕೊಳ್ಳುತ್ತಾ ಚೆನ್ನಗಿಲ್ಲದನ್ನು ಒಮ್ಮೆ ಕೆಳಗೆ ಮತ್ತೆಮ್ಮೋ ಕಿಟಕಿಯಿಂದ ಆಚೆಗೆ ಹಾಕುತ್ತಿದ್ದಳು....ಇದನ್ನು ನೋಡುತ್ತಾ ನಿಂತಿದ್ದ ನಂಗೆ ಕೋಪ ಬರುತ್ತಿರುವುದನ್ನು ಗಮನಿಸಿದ ಅಆಕೆ ತನ್ನೆ ಕೆಲಸವನ್ನೂ ಮುದುವರೆಸುತ್ತಿದ್ದಳು...ಆಕೆ ಹಾಕುತ್ತಿದ್ದ ಕಸ ಕಿಟಕಿಯಿಂದ ಹೊರಗೆ ಯಾವುದೊ ಒಬ್ಬ ವಾಹನ ಸವಾರನ ಮೇಲೆ ಬಿಳುತ್ತಿರಬಹುದೆಂಬ ಪರಿವೆ ಇಲ್ಲವೇ?? ನಾನು ಒಪ್ಪುತ್ತೇನೆ ಮನೆ ಹೊರಗು-ಒಳಗೂ ದುಡಿಯುವ ಮಹಿಳೆಗೆ ಇರುವ ಕಷ್ಟ ಮತ್ತು ಸಮಯದ ಅಭಾವವಿದೆ ಎಂದು....ನಾನು ಕೇಳುವ ಪ್ರಶ್ನೆ ಬಸ್ ವ್ಯವಸ್ಥೆಯಿಲ್ಲದ್ದರೆ ಸರ್ಕಾರವನ್ನು ದೂರುವ ನಾನು ನಮಗೆಂದೇ ಇರುವ ಬಸ್, ಟ್ರೈನ್ ಸಾರ್ವಜನಿಕ ಸ್ವತ್ತುಗಲ್ಲನ್ನು ನಾವು ನೋಡಿಕೊಳ್ಳುವ ರೀತಿ ಇದೇನಾ? ಪ್ರತಿಯೊಂದಕ್ಕೂ ಸರ್ಕಾರವನ್ನು ದೂರುವ, ಬೈಯ್ಯುವ ನಾವು...ನಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಯಾವಾಗ?? ಇದಕ್ಕೆನಾದ್ರು ಒಂದು ಇಲಾಖೆಯನ್ನು ನೇಮಿಸಬೇಕೆ??ಸಾಮಾಜಿಕ ಜವಾಭ್ದಾರಿ ಎಂಬುದನ್ನು ಬಲವಂತವಾಗಿ ನಮ್ಮಲ್ಲಿ  ತುಂಬಬೇಕೇ? ಎಲ್ಲ ಎಚ್ಚರಿಸಬೇಕೆ?? ಟ್ರೈನ್ ನಲ್ಲಿಯೇ ತಿಂದು ಅಲ್ಲಿಯೇ ಹಾಕುವ ಜನರು...ಬಸ್ಸಿನಲ್ಲಿಯೇ ಕಸ ಹಾಕುವ ಜನರು ತಮ್ಮ  ಮನೆಗಳಲ್ಲಿಯೂ ಹೇಗೆ ನೆದೆದುಕೊಲ್ಲುತ್ತರೆಯೇ ??
ಒಮ್ಮೆ ಯೋಚಿಸಿ ಎಲ್ಲದಕ್ಕೂ ನಾವು ಸರ್ಕಾರರವನ್ನು ದೂರುತ್ತೇವೆ.....ನಮಗೆ ಸೌಲಭ್ಯ ನೀಡಿಲ್ಲ ..ಅದಿಲ್ಲ ಇದಿಲ್ಲ ಎಂದು ಆದರೆ ಇರುವ ಸವಲತ್ತುಗಳನ್ನೂ ಎಷ್ಟರ ಮಟ್ಟಿಗೆ ಜೋಪನಮಾಡಿದ್ದೇವೆ...ಇಲ್ಲ ಅವುಗಳ ರಕ್ಷಣೆ ನಮ್ಮ ಹೊಣೆ ಎಂದು ಎಂದಾದರೂ ನೆದಡಿದುಕೊಂದಿದ್ದೆವೆಯೇ...??

No comments:

Post a Comment