ಪುಟಗಳು

10 January 2011

ವ್ಯಕ್ತಿ, ವ್ಯವಸ್ಥೆ ಮತ್ತು ಭಷ್ಟಾಚಾರ...

 ಸ್ನೇಹಿತರೆ ನನ್ನದೊಂದು ಸಣ್ಣ ಪ್ರಶ್ನೆ...ಪ್ರತಿ ದಿನ ನಾವು TV, ದಿನಪತ್ರಿಕೆಗಳಲ್ಲಿ ಭ್ರಷ್ಟಾಚಾರ, ಲಂಚ, ಹಗರಣಗಳು, ಇತ್ಯಾದಿ ಸಮಸ್ಯೆಗಳ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಆರೋಪ ಮತ್ತು ಪ್ರತ್ಯಾರೋಪಗಳನ್ನು ಕೇಳಿ ರೋಸಿಹೊಗಿದ್ದೇವೆ...ಇದಕ್ಕೆ ಸಂಭಂದಿಸಿದಂತೆ ನನ್ನ ಒಂದು ಸಣ್ಣ ಪ್ರಶ್ನೆಯೆಂದರೆ ವ್ಯಕ್ತಿಯಿಂದ ವ್ಯವಸ್ಥೆ ಹಾಳೋ? ಅಥವಾ ವ್ಯವಸ್ಥೆಯಿಂದ ವ್ಯಕ್ತಿ ಹಾಳೋ? ಹಾಳಾಗಿರೋ ವ್ಯವಸ್ಥೆಯಿಂದ ವ್ಯಕ್ತಿ ಹಾಳಗುತ್ತಿದ್ದನೋ ಅಥವಾ ವ್ಯಕ್ಥಿಯಿಂದಲೇ ವ್ಯವಸ್ಥೆ ಹಾಳಗುತ್ತಿದೆಯೋ? ಅನೇಕ ಜನರು ಮಾತನಾಡುವಾಗ...ಮಾತಿನ ಮಧ್ಯೆ ಅಯ್ಯೋ ಬಿಡಿ ನಮ್ಮ ವ್ಯವಸ್ಥೆಯೇ ಹಾಗಿದೆ, ಇಲ್ಲಿ ಲಂಚ ಕೊಡದೆ ಏನು ಆಗುವುದಿಲ್ಲ ಮತ್ತು ಲಂಚ ಪಡೆಯದೇ ಏನು ಮಾಡುವುದಿಲ್ಲ ಇನ್ನು ಜನರು ಬಹಳಷ್ಟು ಮಂದಿ ಇದ್ದಾರೆ.....ಲಂಚ ತೆಗೆದುಕೊಳ್ಳುವವನು ಒಬ್ಬ ವ್ಯಕ್ತಿ ಆದರೆ ಆ ವ್ಯಕ್ತಿಯ ಸುತ್ತಲು ವ್ಯವಸ್ಥೆ ಸುತ್ತುತಿರುತ್ತದೆ....ಇಲ್ಲ ವ್ಯವಸ್ಥೆಯೇ ಭ್ರಷ್ಟ ಎಂದಾದರೆ ಅದರೊಳಗಿನ ಎಲ್ಲಾ ವ್ಯಕ್ತಿಗಳು ಭ್ರಷ್ಟರೇ ಆಗಿರುತ್ತಾರೆ...ಇಡೀ ಭ್ರಷ್ಟ ವ್ಯವಸ್ಥೆಯಲ್ಲಿ ಭ್ರಷ್ಟರಲ್ಲದ ವ್ಯಕ್ತಿಗಳು ಹೇಗೆ ತಮ್ಮ  ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಬರುತ್ತಾರೆ ಎನ್ನುವುದು ಮುಖ್ಯವಾಗುತ್ತದೆ....ಒಂದು ಸಮಾಜದ ಅಭಿವೃದ್ದಿಗೆ ಅಥವಾ ಅಧಃಪತನಕ್ಕೆ ವ್ಯಕ್ತಿ ಮತ್ತು ವ್ಯವಸ್ಥೆ ಎರಡು ಕೂಡ ಜೊತೆ-ಜೊತೆಯಾಗಿ ಕಾರ್ಯ ನಿರ್ವಹಿಸುತ್ತವೆಯೇ?

ಇತ್ತೀಚಿಗೆ ನಡೆದ ಮತ್ತು ನೆಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಗೆ ಇದನ್ನು ಹೋಲಿಸಿ ನೋಡುವ ಒಂದು ಸಣ್ಣ ಪ್ರಯತ್ನ....ಭೂಹಗರಣಗಳಿಗೆ ಕುರಿತಂತೆ ಅನೇಕ ರಾಜಕೀಯ ವ್ಯಕ್ತಿಗಳು ತಮ್ಮ ಮೂಗಿನ ನೇರಕ್ಕೆ ಮಾತನಾಡಿದ್ದು ನಮೆಗೆಲ್ಲ ತಿಳಿದೇ ಇದೇ...ಯಡಿಯೂರಪ್ಪನವರು ಭೂಹಗರಣಗಳನ್ನು ಮಾಡಿದ ಮೊದಲ ವ್ಯಕ್ಥಿಯೇನಲ್ಲ ಅದಕ್ಕೆ ಹಿಂದೆ ಇದ್ದ JDS, Congress ಪಕ್ಷಗಳು ಕೂಡ ಇಂಥಹ ಹಗರಣಗಳನ್ನು ಮಾಡಿವೆ, ಯಾರೂ ಮಾಡದ್ದನ್ನ ನಾವೇನು ಮಾಡಿಲ್ಲ ಎಂಬುದು ಇವರ ದೂರುಗಳು...ಹಾಗಾದರೆ ಪ್ರಾಮಾಣಿಕವಾಗಿ ದುಡಿಯುವ ಪಕ್ಷ ಯಾವುದು?? ಪ್ರಾಮಾಣಿಕ ವ್ಯಕ್ತಿಗಳು ಯಾರು?? ಅಂದರೆ ಈ ಎಲ್ಲಾ ಹಗರಣಗಳ ಹಿಂದೆ ವ್ಯಕ್ತಿಗಳೇ ಇದ್ದರೂ ಸಹ ಇಡಿಯಾಗಿ ವ್ಯವಸ್ಥೆಯೇ ಭ್ರಷ್ಟ ಎನಿಸಿಬಿಡುತ್ತದೆ.....ಇಗ ನಾವು ವ್ಯವಸ್ಥೆಯನ್ನು ದೂರಬೇಕೋ ಅಥವಾ ವ್ಯವಸ್ಥೆಯನ್ನು ತಾನೆ ಸೃಷ್ಟಿಸಿ, ತಾನೆ ಅದನ್ನು ಹಾಳು ಮಾಡುವ ವ್ಯಕ್ಥಿಯನ್ನೋ?? ಇವೆರಡನ್ನೂ ಇಡಿಯಾಗಿ ನೋಡಿದರೆ ಕಾಣುವುದು ವ್ಯವಸ್ಥೆಯ ಹಿಂದೆ ಇರುವ ವ್ಯಕ್ತಿ ಮತ್ತು ವ್ಯಕ್ತಿಯ ಹಿಂದೆ ಇರುವ ವ್ಯವಸ್ಥೆ.... ವ್ಯವಸ್ಥೆಯನ್ನು ಸೃಷ್ಟಿಸಿದ ವ್ಯಕ್ತಿಯೇ ಅದನ್ನು ಹಾಳು ಮಾಡುತ್ತಿದ್ದಾನೆ... ನಮ್ಮ ಜನರು ಮಾತನಾಡುವಾಗ ಸಾಮಾನ್ಯವೇನೋ ಎಂಬಂತೆ ಹೇಳುವ ಅಭಿಪ್ರಾಯ...ನಮ್ಮ ದೇಶವನ್ನು ಹಾಳು ಮಾಡುತ್ತಿರುವವರು ರಾಜಕೀಯ ವ್ಯಕ್ತಿಗಳು ಎಂದು...ಎಲ್ಲಾ ತಪ್ಪುಗಳನ್ನು ರಾಜಕೀಯ ವ್ಯಕ್ತಿಗಳ ಮೇಲೆ ಹೇರುವುದು ಸರಿಯೇ??  ಇದರಲ್ಲಿ ನಮ್ಮ ಪಾಲೆಷ್ಟು ಅವರ ಭ್ರಷ್ಟಾಚಾರಕ್ಕೆ ನೇರವಾಗಿಯೋ ಅಥವ ಪರೋಕ್ಷವಾಗಿಯೋ ನಾವು ಸಹಕರಿಸುತ್ತಿಲ್ಲವೇ?? ನಾವು ಕೂಡ ಎಷ್ಟು ದುಡ್ಡು ಕೊಟ್ಟಾದರೂ ಸರಿ ನಮ್ಮ ಕೆಲಸವಾಗಬೇಕೆಂದು ಬಯಸುವುದಿಲ್ಲವೇ? ಅಂತೆಯೇ ಅವರು ಸಹ ತನಗೆ ಏನು ಸಿಗುತ್ತದೆಂದು ಯೋಚಿಸುವಾಗ ಕೇವಲ ಅವರನ್ನು ಮಾತ್ರ ಭ್ರಷ್ಟರೆಂದು ಕರೆದು ನಮ್ಮನ್ನು ಅವರಿಗೆ ಬಲಿಪಶುಗಳೆಂದು ಹೇಳಿಕೊಳ್ಳುವಲ್ಲಿ ಯಾವ ಅರ್ಥವೂ ಇಲ್ಲ..ಇಲ್ಲಿ ಎಲ್ಲರು ಬಯಸುವುದು ಸ್ವ-ಹಿತವನ್ನು ಮಾತ್ರ ಅಲ್ಲವೇ??? ಹಾಗಾದರೆ ಸಮಾಜದ ಹಿತವನ್ನು ಬಯಸುವವರು ಯಾರು??  ಇಂದು ಪ್ರಜಾಪ್ರಭುತ್ವ ಯಾವ ಹಂತ ತಲುಪಿದೆಯೆಂದರೆ ಇಲ್ಲಿ ಯಾರಿಗೂ ಆದರ್ಶಗಳು ಬೇಕಿಲ್ಲ... ಅವುಗಳಿಂದ ಹೊಟ್ಟೆ ತುಂಬುವುದಿಲ್ಲ, ಅದಕ್ಕಾಗಿ ತಮ್ಮ ಚಿಕ್ಕ ಚಿಕ್ಕ ಹೊಟ್ಟೆಗಳನ್ನು ತುಂಬಿಸಿಕೊಳ್ಳಲು ದೊಡ್ಡ ದೊಡ್ಡ  ಕೆಲಸಗಳನ್ನು ಮಾಡುತ್ತಿರುತ್ತಾರೆ... ಇಂದು ಭ್ರಷ್ಟಾಚಾರದ ಬೇರುಗಳು ಎಲ್ಲೆಲ್ಲಿಯೂ ಹಬ್ಬಿ ಬಿಟ್ಟಿದೆ, ಮನೆಯಿಂದ ಹಿಡಿದು - ಸಮಾಜದವರೆಗೆ. ಹಾಗೆ ಕೇಳಿದವೆರೆಲ್ಲ ದೂರುವುದು ವ್ಯವಸ್ಥೆ ಇರುವುದೇ ಹಾಗೆ ಬಿಡಿ ಇನ್ನುತ್ತ ಅದೇ ವ್ಯವಸ್ಥೆಯಲ್ಲಿನ ವ್ಯಕ್ತಿಗಳನ್ನು ಬೆರಳು ಮಾಡಿ ತೋರಿಸುವ ನಾವು ಇಂಥಹ  ಭ್ರಷ್ಟಾಚಾರಿ ವ್ಯವಸ್ಥೆಯನ್ನು ಬದಯಲಿಸುವುದಕ್ಕೆ ಎಂದಾದರೂ ಮನಸ್ಸು ಮಾಡಿದ್ದೆವೆಯೇ ?? ಹೋಗಲಿ ಅದರ ವಿರುದ್ದ ಮಾತನಾಡುವ ದೈರ್ಯವನ್ನಾದರೂ ಮಾಡಿದ್ದೆವೆಯೇ ?? ಮಾತನಾಡುವುದು ಕೇವಲ ಮನೆಯಲ್ಲಿ, ಸ್ನೇಹಿತರ ಮಧ್ಯೆ, ಗುಂಪು ಗುಂಪಾಗಿ ನಿಂತಾಗ ಕಾಲಹರಣದ ಚರ್ಚೆಯ ವಿಷಯಗಳಾಗಿ ಮಾತನಾಡುತ್ತ ಅಲ್ಲೇ ಮರೆತು ಬಿಡುತ್ತೇವೆ...ವ್ಯವಸ್ಥೆಯನ್ನು ಸೃಷ್ಟಿಸಿದ್ದು ವ್ಯಕ್ತಿ, ಅದು ಹಾಳಾಗುತ್ತಿರುವುದು ವ್ಯಕ್ತಿಯಿಂದ ಎಂದಾಗ ವ್ಯಕ್ಥಿಯಿಂದಲೇ ಅದನ್ನು ಬದಲಾಯಿಸುವುದು ಸಾಧ್ಯವಿಲ್ಲವೇ? ಇನ್ನು ಇತ್ತೀಚಿನ ಚುನಾವಣ ಪ್ರಕ್ರಿಯೆಗಳನ್ನು ನೋಡಿದಾಗ ನಮ್ಮ ಪ್ರಜಾಪ್ರಭುತ್ವ ಮತ್ತು ಮತದಾರನ ನೈತಿಕತೆಯ ಬಗ್ಗೆ ಅಸಹ್ಯ ಎನಿಸುವಷ್ಟು ಬೇಸರವಾಗುತ್ತದೆ....ಚುನಾವಣೆಯಲ್ಲಿ ಹಣ-ಹೆಂಡ ಹಂಚುವುದು ಇದೇ ಮೊದಲಲ್ಲ ಆದರೆ ಇತ್ತೀಚಿಗೆ ಹಣ-ಹೆಂಡದ ಜೊತೆಗೆ ಸೀರೆ, ಪಾತ್ರೆ, ಕೋಳಿ, ಅಕ್ಕಿ, ಮೂಗುಬೊಟ್ಟು, ಕೊನೆಗೆ ದೇವರ ವಿಗ್ರಹಗಳನ್ನೂ ಹಂಚುವುದು ಶುರುವಾಗಿಬಿಟ್ಟಿದೆ. ಇಂದು ವ್ಯವಸ್ಥಿತವಾಗಿ  ಸಮಾಜದ ಅಭಿವೃದ್ದಿಗಾಗಿ  ಮತ "ದಾನ" ವಾಗಿ ಉಳಿಯದೆ ಮತ "ಮಾರಾಟ"ವಾಗುತ್ತಿದೆ. ಹೇಗೆ ಮಾಡುವ ಬದಲಿಗೆ ಸಾರ್ವಜನಿಕವಾಗಿ ಮತಗಳನ್ನು ಹರಾಜು ಹಾಕುವುದೇ ಉತ್ತಮ ಎನಿಸುತ್ತದೆ. ಕೊನೆ ಪಕ್ಷ ಒಬ್ಬರನ್ನೊಬ್ಬರು ಒಳಗಿಂದೊಳಗೆ ದ್ವೇಷಿಸಿ, ಕೊಲೆ, ಅಪಹರಣಗಳಂತಹ ಕಾರ್ಯಗಳು ಸಂಬವಿಸುವುದು ಕಡಿಮೆಯಾಗುತ್ತದೆ. ನೇರವಾಗಿ ಇಷ್ಟು  ದೊಡ್ದು ಕೊಟ್ಟು ನಾನು ಮತದಾರರನ್ನು  ಖರಿದಿಸಿದ್ದೇವೆ ನೀವು ಬೇಕಾದರೆ ಅದಕ್ಕಿಂತ ಹೆಚ್ಚಿನ ದುಡ್ಡು ಕೊಟ್ಟು ಖರಿದಿಸಿ ಎಂದು ನೇರವಾಗಿ ಹೇಳಬಹುದು ಮತದಾರನು ಸಹ ಎಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆಯೋ ಆ ಪಕ್ಷಕ್ಕೆ ಮತ ಹಾಕ ಬಹುದು  ಅಲ್ಲವೇ?? ನೋಡಿ ಎಲ್ಲಿಗೆ ಬಂದು ತಲುಪಿದೆ ನಮ್ಮ ವ್ಯವಸ್ಥೆ ಮತ್ತು ವ್ಯಕ್ತಿಗಳು....ನಮ್ಮ ಸಮಾಜದಲ್ಲಿ ನೈಜ ಪ್ರಜಾಪ್ರಭುತ್ವ ಅರಳುವುದದರು ಎಂದು ???           

2 comments:

  1. ಸವಿತಾ
    ನಾವೇ ವ್ಯವಸ್ಥೆ ಮಾಡಿದ್ದು ,
    ನಮ್ಮ ಮನೋಭಾವ ಬದಲಾಗದೆ ವ್ಯವಸ್ಥೆ ಬದಲಾಗದು
    ಸುಮ್ಮನೆ ಸರ್ಕಾರ ಬೈದು ಪ್ರಯೋಜನ ಇಲ್ಲ
    ಸರಕಾರ ಕಸ ಹಾಕಲು ತೊಟ್ಟಿ ಮಾಡಿದೆ
    ನಮ್ಮಲ್ಲಿ ಎಷ್ಟು ಜನ ತೊಟ್ಟಿಗೆ ಕಸ ಹಾಕುತ್ತಾರೆ ಹೇಳಿ
    ಮನುಷ್ಯನ ಮನಸ್ಸಿನ ಬದಲಾವಣೆ ಆಗದ ಹೊರತು ಸಮಾಜ ಸುಧಾರಣೆ ಕನಸು
    ಸುಂದರ ಚಿಂತನಶೀಲ ಬರಹ

    ReplyDelete
  2. Hi,

    We think; It is very difficult to change, so we are accepting it..!

    There are lot of things can be done, but we just comment. And we believe what they are doing is wrong things.

    I commented like this.

    http://haagesumane.blogspot.com/2011/01/kill-them-all-if-possible-at-once.html


    Haage Sumane

    ReplyDelete