ಪುಟಗಳು

15 December 2011

ಕ್ರಾಂತಿಯ ಆರಂಭ ಎಲ್ಲಿಂದ ?? ಯಾರಿಂದ ??



ಮಾನವನ ಸ್ವಭಾವವೇ ಹಾಗೆ ಅನಿಸುತ್ತದೆ ಇರುವ ವ್ಯವಸ್ಥೆ ಸರಿ ಇಲ್ಲ ಎಂದು ಗೊಣಗುತ್ತಾ ಇರುವ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಗುಂಪಿನಲ್ಲಿ ನಿಂತು ಸ್ನೇಹಿತರ ಜೊತೆ ಹರಟುತ್ತಿರುತ್ತೇವೆ. ಅಲ್ಲಿ ನಾವು ಮಾತನಾಡುವ ಪರಿ ಹೇಗಿರುತ್ತದೆಯೆಂದರೆ ಅಲ್ಲಿಂದಲೇ ಒಬ್ಬ ಕ್ರಾಂತಿಕಾರಿ ವ್ಯಕ್ತಿಯ ಉಗಮವಾಗಿ ವ್ಯವಸ್ಥೆಯ ವಿರುದ್ಧ ಹೋರಾಡಿ ಬದಲಾವಣೆ ತಂದುಬಿಡುತ್ತೇವೆನೋ ಎಂಬ ಭಾವನೆ ಮೊಳೆಯುತ್ತದೆ, ನಂತರ ಈ ಎಲ್ಲಾ ಯೋಚನೆಗಳು ನಡೆದ ಮರು ಘಳಿಗೆ ಇಲ್ಲವನ್ನು ಮರೆತು ನಮ್ಮ ಮನೆ-ನಮ್ಮದೇ ಅದ ವೈಯುಕ್ತಿಕ ಸಮಸ್ಯೆಗಳ ಸುಳಿಯಲ್ಲಿ ಮುಳುಗಿ ಹೋಗುತ್ತೇವೆ. ಇನ್ನು ರಸ್ತೆ ಬದಿಯಲ್ಲಿ ನಿಂತು ಉದ್ದುದ್ದ ಭಾಷಣ ಮಾಡುವಾಗ ಇರುವ ಆಸಕ್ತಿ ಮತ್ತು ನಾಯಕತ್ವದ ಭಾವನೆ ಅದರ ಮುಂದಾಳತ್ವ ವಹಿಸಿ ಅದನ್ನು ಕಾರ್ಯರೂಪಕ್ಕೆ ತರುವಾಗ ಮಾತ್ರ ಹಿಂದೆ ಸರಿದು ಬಿಡುತ್ತದೆ. 

ಒಬ್ಬ ಸಾಮಾನ್ಯ ಮನುಷ್ಯ ಕ್ರಾಂತಿ ಎಂಬ ಪದ ಕೇಳುತ್ತಲೇ ಅವನಿಗೆ ಬರುವ ಯೋಚನೆ ಯಾವುದೊ ಒಂದು ಬಾಹ್ಯ ಶಕ್ತಿಯ ಕಾರಣ ಅಥವಾ ಆಗಮನದಿಂದಾಗಿ ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸಿವುದು ಎಂದು ಅನೇಕರು ಭಾವಿಸಿರುತ್ತಾರೆ. ಯಾವುದೊ ಒಬ್ಬ ವ್ಯಕ್ತಿ ಅಥವ ಯಾವುದೊ ಒಂದು ಸಂಘಟನೆ ಕ್ರಾಂತಿಯ ಮುಂದಾಳತ್ವ ವಹಿಸಿ ಪರಿವರ್ತನೆ ಆಗುತ್ತದೆ ಎಂಬುದು ಎಲ್ಲರ ಸಾಮಾನ್ಯ ನಂಬಿಕೆ. ಇತಿಹಾಸದ ಪುಟಗಳನ್ನ ತಿರುವಿ ಹಾಕಿದಾಗ ಅದೆಷ್ಟೋ ಕ್ರಾಂತಿಗಳು ಸಂಭವಿಸಿರುವುದು ಕಣ್ಣಮುಂದೆ ಬಂದು ನಿಲ್ಲುತ್ತವೆ; ಒಂದು ವ್ಯವಸ್ಥೆ ಅಥವಾ ವ್ಯಕ್ತಿಯ ದಬ್ಬಾಳಿಕೆಯಿಂದ ಬೇಸತ್ತ ಜನರು ದಂಗೆಯೆದ್ದ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. 1792 1802ರ ಕಾಲಘಟ್ಟದಲ್ಲಿ ನೆಡದ ಫ್ರೆಂಚ್ ಕ್ರಾಂತಿ, ರಾಜನ ದಬ್ಬಾಳಿಕೆಗೆ ಬೆಂದ ಜನರು ದಂಗೆಯೆದ್ದದ್ದು; ಅಂತೆಯೇ 1917 ರಲ್ಲಿ ಸಂಭವಿಸಿದ ರಷ್ಯ ಕ್ರಾಂತಿಯು ಸಹ ತನ್ನದೇ ಆದ ಸ್ವರೂಪ ಹೊಂದಿತ್ತು, ಕ್ರಾಂತಿ ಎಂದಾಗ ಕೇವಲ ಯುದ್ದಗಳೆಂದಲ್ಲ, ಒಂದು ಕಡೆ ಯುದ್ದಗಳ ಮೂಲಕ ಕ್ರಾಂತಿಯು ತನ್ನ ಸ್ವರೂಪವನ್ನು ತೋರಿಸಿದರೆ ಇನ್ನೊಂದೆಡೆ ಕೈಗಾರಿಕ ಕ್ರಾಂತಿ, ಹಸಿರು ಕ್ರಾಂತಿಯಂತಹ ಅದೆಷ್ಟೋ ಕ್ರಾಂತಿಗಳು ಮನುಷ್ಯನ ಜೀವನದ ಶೈಲಿಗೆ ಸದ್ದಿಲ್ಲದೆ ಲಗ್ಗೆ ಹಾಕಿರುವುದು ಕಾಣುತ್ತೇವೆ. 

ಯುದ್ದಗಳ ಮೂಲಕ ಇರುವ ವ್ಯವಸ್ಥೆಯ ಪರಿವರ್ತನೆ ಆಗಿರುವುದು ಕ್ರಾಂತಿಯ ಒಂದು ಮುಖವಾದರೆ, ವಿವಿಧ ರೀತಿಯ ಆವಿಷ್ಕಾರ–ಅನ್ವೇಷಣೆಗಳ ಮೂಲಕ ಸಮಾಜ ಪರಿವರ್ತನೆಯ ಕಡೆಗೆ ಸಾಗುವಂತೆ ಮಾಡುವುದು ನಮಗೆ ಕಂಡಿರುವ ಕ್ರಾಂತಿಯ ಇನ್ನೊಂದು ಮುಖ. ಕ್ರಾಂತಿ ಸಂಭವಿಸಿತೆಂದರೆ ಅದರ ಪರಿಣಾಮ ಧನಾತ್ಮಕವಾಗಿಯೇ ಇರುತ್ತದೆಂದು ಹೇಳಲಾಗದು, ಕೆಲವು ಸಂದರ್ಭಗಳಲ್ಲಿ ಆ ಕ್ಷಣಕ್ಕೆ ಅದ ಪರಿವರ್ತನೆ ಧನಾತ್ಮಕವಾಗಿಯೇ ಕಂಡರೂ ಭವಿಷ್ಯದಲ್ಲಿ ಅದರ ಪರಿಣಾಮಗಳು ಅತ್ಯಂತ ಭೀಕರವಾಗಿರಬಹುದು. ಇದಕ್ಕೆ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ನಡೆದ ಕೈಗಾರಿಕ ಕ್ರಾಂತಿಯ ಪರಿಣಾಮವಾಗಿ ಕೃಷಿ, ಉತ್ಪಾದನೆ, ಗಣಿಗಾರಿಕೆ, ಸಾರಿಗೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ  ಮಹತ್ವದ ಪರಿವರ್ತನೆ ತಂದಿತು. ಇದರ  ಪರಿಣಾಮವಾಗಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬದಲಾವಣೆ ಉಂಟಾಗಿ ಮಾನವ ಇತಿಹಾಸದಲ್ಲಿ ಅತ್ಯಂತ ಮಹತ್ವದ ತಿರುವು ಇಂದು ಗುರುತಿಸುವಂತಾಗಿದೆ. ಇನ್ನು ಹಸಿರು ಕ್ರಾಂತಿಯಿಂದಾಗಿ ಆದ ಪರಿಣಾಮ ತತ್ಕ್ಷಣಕ್ಕೆ ಅತೀ ಮಹತ್ವದೆನಿಸಿದರು, ಅತಿಯಾದ ರಾಸಾಯನಿಕಗಳು, ವಿವಿ ರೀತಿಯ ಔಷಧಿಗಳ ಬಳಕೆಯಿಂದಾಗಿ ಭೂಮಿಯ ಮೇಲಾದ ಪರಿಣಾಮವನ್ನು ನಾವು ಮರೆಯುವಂತಿಲ್ಲ; ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಬಂದಿರುವುದು ಜೊತೆಗೆ ಅತೀ ಹೆಚ್ಚು ಇಳುವರಿ ಪಡೆಯಲು ನಾವು ಬಳಸುವ ರಾಸಾಯನಿಕಗಳ ಸಂಖ್ಯೆ ಕಡಿಮೆಯೇನಿಲ್ಲ.

ಜಪಾನ್ ನಲ್ಲಿ ಅದ ಅನಿಲ ಸೋರಿಕೆಯ ಪರಿಣಾಮ ನಮ್ಮೆಲ್ಲರ ಕಣ್ಣ ಮುಂದೆ ಹಾಗೆಯೆ ಇದೆ... ಇತ್ತೀಚಿಗೆ ನಡೆದ ಘಟನೆಯನ್ನು ಮರೆಯಲು ಹೇಗೆ ಸಾಧ್ಯ? ಪರಮಾಣು ಶಕ್ತಿಯಿಂದ ಜಗತ್ತನ್ನೇ ತನ್ನ ಹತೋಟಿಗೆ ತರುತ್ತೇನೆ ಎಂದು ಯೋಚಿಸಿದ ಮಾನವ ಪರಮಾಣು ಶಕ್ತಿಯಿಂದ ಕ್ರಾಂತಿ ಮಾಡಲು ಹೊರಟ, ಅದರಿಂದ ಆದ ದುಷ್ಪರಿಣಾಮ ನಮ್ಮೆಲ್ಲರಿಗೂ ತಿಳಿದಿದೆ. ಹೀಗೆ ಮಾನವ ವಿವಿದ ರೀತಿಯ ಅನ್ವೇಷಣೆಗಳ ಮೂಲಕ, ಹೊಸ ಹೊಸ ತಂತ್ರಜ್ಞಾನಗಳ ಬಳಕೆಯಿಂದಾಗಿ ಹೊಸ ಆವಿಷ್ಕಾರಗಳ ಮೂಲಕ ಅಭಿವೃದ್ದಿಯ ಕಡೆ ಸಾಗುತ್ತಿದ್ದೇವೆ ಎಂದು ತಿಳಿದು ಭವಿಷ್ಯದಲ್ಲಿ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸದೆ ಇಂದಿನ ಫಲಿತಾಂಶದ ಬಗ್ಗೆ ಮಾತ್ರ ಯೋಚಿಸುವುದರ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇದು ಒಂದು ಜ್ವಲಂತ ನಿರ್ಶನ.

ಹಿಂದೆಲ್ಲಾ ಕ್ರಾಂತಿ ಎಂದರೆ ತಟ್ಟನೆ ನೆನಪಾಗುವುದು ಸಾಮಾಜಿಕ ಬದಲಾವಣೆ ಅಥವಾ ವ್ಯವಸ್ಥೆಯನ್ನೇ ಬದಲಾಯಿಸುವುದಕ್ಕಾಗಿ; ಇಂಥಹ ಒಂದು ಮಹತ್ತರ ಉದ್ದೇಶಕ್ಕೆ ಕ್ರಾಂತಿಯಂತಹ ಕಾರ್ಯಾಚರಣೆಗಳು ನಡೆಯುತ್ತಿತ್ತು. ಹಾಗಾಗಿ ಸಾಮಾನ್ಯರಿಗೆ ಕ್ರಾಂತಿ ಎಂದರೆ ದೊಡ್ಡ ವಿಷಯ ಮತ್ತು ಭಾರವಾದ ಪದವಾಗಿಯೂ ಕಾಣುತ್ತಿತ್ತು. ಆದರೆ ಇಂದು ಸಣ್ಣ ಪುಟ್ಟ ಕಾಲೆಳೆಯುವ ತಂತ್ರಗಳನ್ನು ಕೂಡಾ ಕ್ರಾಂತಿ ಪಟ್ಟಿಯಲ್ಲಿ ಸೇರಿಸಿದ್ದೇವೆ, ಕ್ರಾಂತಿಯ ಮೂಲ ಅರ್ಥ ನಾವು ಎಂದುಕೊಂಡ ಸ್ವರೂಪದಲ್ಲಿಲ್ಲ. ನಮಗೆಲ್ಲಾ ತಿಳಿದಿರುವಂತೆ ಕರ್ನಾಟಕ ರಾಜ್ಯದ ರಾಜಕೀಯ ಡೊಂಬರಾಟವನ್ನು ಮಾಧ್ಯಮದಲ್ಲಿ ಬಿತ್ತರಿಸಿರುವ ರೀತಿ, ಪ್ರತಿದಿನ ಒಂದಲ್ಲಾ ಒಂದು ಪತ್ರಿಕೆಯಲ್ಲಿ ಈ ಬಗ್ಗೆ ಕ್ರಾಂತಿ ಎಂಬ ಪದ ಬಳಕೆ ಮಾಡಿರುತ್ತಾರೆ.  

ಬದಲಾವಣೆ ಯಾರಿಗೆ ಬೇಡ!, ಬದಲಾವಣೆಯಿಂದ ಏನಾದರು ಒಳ್ಳೆಯದಾಗಲಿ ಎನ್ನುವ ಆಕಾಂಕ್ಷೆ ಸಹಜವಾಗಿಯೇ ಇರುತ್ತದೆ. ಹಾಗಾಗಿ ಕ್ರಾಂತಿಯ ಗುಣಗಳು ಎಲ್ಲರಲ್ಲಿಯೂ ಇರುತ್ತವೆ, ಎಲ್ಲರೂ ಅದನ್ನು ಪ್ರದರ್ಶಿಸಲು ಹೋಗುವವರೆ, ಸಾರ್ವಜನಿಕ ಹಿತಾಸಕ್ತಿಗೋಸ್ಕರ ತೊಡಗಿಕೊಳ್ಳುವವರಿಗೆ ಹಲವರ ಸಹಾಯ ಹಸ್ಥ ಸಿಗುತ್ತದೆ. ಇತ್ತೀಚಿಗೆ ಭ್ರಷ್ಟಾಚಾರದ ವಿರುದ್ದ ಕ್ರಾಂತಿಗೆ ನಾಂದಿ ಹಾಡಿದ ಅಣ್ಣಾ ಹಜಾರೆ ಇದಕ್ಕೊಂದು ಉತ್ತಮ ನಿದರ್ಶನ. ಇನ್ನು ಕೆಲವರದ್ದು ಕ್ರಾಂತಿಯ ಸ್ವರೂಪ ಮತ್ತು ಮುನ್ನಡೆಸುವಲ್ಲಿನ ಕಾರ್ಯತಂತ್ರಗಳು ವಿಭಿನ್ನವಾಗಿರುತ್ತದೆ, ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿಯಿಂದ ಹತ್ತಿಕ್ಕಲ್ಪಡುತ್ತದೆ ಅಥವಾ ಅದರ ಮೊಣಚನ್ನು ಕಳೆದುಕೊಂಡಿರುತ್ತದೆ. ಕ್ರಾಂತಿ ಮನುಷ್ಯನ ಸಹಜ ಗುಣವಾಗಬೇಕು, ಕ್ರಾಂತಿ ಎಲ್ಲೂ ಅದೃಷ್ಯವಾಗಿರುವುದಿಲ್ಲ. ಪ್ರತೀ ವ್ಯಕ್ತಿಯಲ್ಲಿಯೂ ಕ್ರಾಂತಿಯ ಸ್ವಭಾವವಿರುತ್ತದೆ ಕೆಲವರು ಪ್ರಕಟಿಸುತ್ತಾರೆ ಮತ್ತೆ ಕೆಲವರು ಕ್ರಾಂತಿಯನ್ನು ಬೆಂಬಲಿಸುವ ಮೂಲಕ ವ್ಯಕ್ತಪಡಿಸುತ್ತಾರೆ ಇನ್ನು ಕೆಲವರು ಸಂಘಗಳು, ಸಂಘಟನೆ ಇತ್ಯಾದಿಗಳನ್ನು ಸೇರುವ ಮೂಲಕ ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ವ್ಯಕ್ತಿ ತನ್ನ ಬೇಕು ಬೇಡಗಳನ್ನು ವಿಮರ್ಷಿಸಬೇಕು, ಬೇಡವಾದಾಗ, ಶೋಷಣೆಗೆ ಒಳಗಾದಾಗ ದೊಡ್ಡ ದ್ವನಿಯೊಂದು ಮೊಳಗಬೇಕು, ಆಗ ಕ್ರಾಂತಿಗೆ ನಾಂದಿ ಹಾಡಿದಂತೆ ಮತ್ತು ಅದರ ಧ್ವನಿಗೆ ಮನುಕುಲದ ಪ್ರಾಮಾಣಿಕ ಒಳಿತಿಗೆ ಕೈಜೋಡಿಸುವ ಜೊತೆಗೆ ಅನ್ಯಾಯವನ್ನು ವಿರೋಧಿಸುವ ಜನಸಮೂಹ ಕಟ್ಟಿಕೊಳ್ಳುವ ಶಕ್ತಿ ಅದಕ್ಕಿರಬೇಕು. ಇದರಿಂದಾಗಿ ಸಮಾಜ ಒಂದು ಬದುಕಲು ಯೋಗ್ಯ ತಾಣವಾಗಿ ರೂಪುಗೊಳ್ಳುವಲ್ಲಿ ಎರಡು ಮಾತಿಲ್ಲ ಅಲ್ಲವೇ??

29 November 2011

ನಿಸರ್ಗಮಾತೆಗೆ ನಾವೆಷ್ಟು ಆಭಾರಿಯಾಗಿದ್ದೇವೆ???


ಒಂದು ಪ್ರದೇಶದ ಅಭಿವೃದ್ದಿ ಅಲ್ಲಿ ದೊರೆಯುವ ನೈಸರ್ಗಿಕ ಸಂಪತ್ತು ಮತ್ತು ಅದರ ಸರಿಯಾದ ಬಳಕೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ನಾವೆಲ್ಲ ಅರಿತಿದ್ದೇವೆ. ನೈಸರ್ಗಿಕ ಸಂಪತ್ತಿನ ಬಳಕೆಯ ಜೊತೆಗೆ ಪರಿಸರ ಸಂರಕ್ಷಣೆಯ ಹೊಣೆಯು ಕೂಡ ನಮ್ಮದೇ ಆಗಿರುತ್ತದೆ. ನಮ್ಮಲ್ಲಿ ಎಷ್ಟು ಜನರು ಪರಿಸರ ಸಂರಕ್ಷಣೆಯ ಬಗ್ಗೆ ಯೋಚಿಸುತ್ತಾರೆ? ತಮ್ಮ ದಿನ ನಿತ್ಯದ ಜೀವನದ ಜಂಜಾಟದಲ್ಲಿ ಅದೆಷ್ಟು ಜನರು ಇದರ ಬಗ್ಗೆ ತಮ್ಮ ಅಮೂಲ್ಯವಾದ ಸಮಯವನ್ನು ಇದರ ಬಗ್ಗೆ ಯೋಚಿಸಲು ಕಳೆಯುತ್ತಾರೆ? ಎಷ್ಟು ಜನರು ಪರಿಸರ ಸಂರಕ್ಷಣೆಯ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದಾರೆ? ಪ್ರಜಾಪ್ರಭುತ್ವ ವ್ಯವಸ್ಥೆ, ನಮ್ಮ ಹಕ್ಕು-ಬಾಧ್ಯತೆ, ವ್ಯಕ್ತಿ ಸ್ವಾತಂತ್ರ ಮತ್ತು ನಮ್ಮ ಮೂಲಭೂತ ಕರ್ತವ್ಯಗಳ ಬಗ್ಗೆ ಮಾತನಾಡುವ ನಾವು ಪರಿಸರ ಸಂರಕ್ಷಣೆಯನ್ನು ಕೂಡ ನಮ್ಮ ಕರ್ತವ್ಯಗಳಲ್ಲಿ ಒಂದು ಎಂದು ಏಕೆ ಭಾವಿಸುವುದಿಲ್ಲ? ದಿನ ನಿತ್ಯದ ನಾವು ಓಡಾಡುವಾಗ, ವಾಹನಗಳಲ್ಲ್ಲಿ ಪ್ರಯಾಣಿಸುವಾಗ, ಸ್ನೇಹಿತರ ಜೊತೆ ಗುಂಪಿನಲ್ಲಿ ನಿಂತು ಮಾತನಾಡುತ್ತಿರುವಾಗ...ಹೇಗೆ ಅನೇಕ ಸಂಧರ್ಭಗಳಲ್ಲಿ ನಮಗೆ ಅರಿವಿಲ್ಲದಂತೆ ಪರಿಸರ ಮಾಲಿನ್ಯ ಮಾಡುತ್ತಿರುತ್ತೇವೆ. ಕೇವಲ ನಮ್ಮ ಅಗತ್ಯ ಮತ್ತು ಅನುಕೂಲತೆಯ ಬಗ್ಗೆ ಚಿಂತಿಸುವ ನಾವು ಎಂದಾದರೂ ನಮ್ಮಿಂದ ಪ್ರಕೃತಿಯ ಮೇಲಾಗುತ್ತಿರುವ ದಬ್ಬಾಳಿಕೆಯ ಬಗ್ಗೆ ಚಿಂತಿಸಿದ್ದೇವೆಯೇ? ಸರ್ಕಾರ ಪರಿಸರ ಸಂರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳು, ಯೋಜನೆಗಳು, ಅನೇಕ ನಿಯಮಗಳನ್ನು ಜಾರಿಗೆ ತಂದಿದ್ದರೂ ಅವುಗಳನ್ನು ಪಾಲಿಸುತ್ತಿದ್ದೆವೆಯೇ? ಜನರೇ ಅವುಗಳನ್ನು ಪಾಲಿಸದೆ ಹೋದಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅವುಗಳನ್ನು ಅನುಷ್ಟಾನಕ್ಕೆ ತಂದ ಪ್ರಯೋಜನವಾದರೂ ಏನು? ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದವಿದ್ದರೂ ಎಷ್ಟು ಜನರು ಅದನ್ನು ಪಾಲಿಸುತ್ತಿದ್ದಾರೆ? ಅಸಲಿಗೆ ಪಾಲಿಸದೆ ಇರುವವರಲ್ಲಿ ಹೆಚ್ಚು ಜನರು ವಿದ್ಯಾವಂತರೇ ಆಗಿರುತ್ತಾರೆ ಎಂಬುದು ನೋವಿನ ಸಂಗತಿ. 
ತಮ್ಮ ಮನೆಯ ಒಳಗೆ ಮಾತ್ರ ಕಸ ಇರಬಾರದು, ಮನೆಯ ಹೊಸಲಿನಿಂದ ಹೊರಗೆ ಹೇಗಾದರೂ ಇರಲಿ ಎನ್ನುವ ಮನೋಭಾವುಳ್ಳ ಜನರಿದ್ದಾರೆ. ಇನ್ನು ನಿಸರ್ಗದ ಅಂದವನ್ನು ಸವಿಯಲೆಂದು ಪ್ರವಾಸ ಹೋಗುವ ಮಂದಿ ನಿಸರ್ಗದ ಸೊಬಗನ್ನು ಸವಿಯುವುದರ ಜೊತೆಗೆ ಅಲ್ಲಿನ ಪರಿಸರ ಮಾಲಿನ್ಯಕ್ಕೆ ತಮ್ಮ ಪಾಲನ್ನು ಕೊಟ್ಟು ಬರುತ್ತಾರೆ. ಅನೇಕ ಜನರ ತಿಳುವಳಿಕೆಯೆಂದರೆ ಕೇವಲ ಓಟು ಹಾಕುವುದು ಮಾತ್ರ ನಮ್ಮ ಕರ್ತವ್ಯ ಉಳಿದ ಜವಾಬ್ಧಾರಿ ಸರ್ಕಾರದ್ದು, ಅದರಂತೆಯೇ ಪರಿಸರ ಸಂರಕ್ಷಣೆಯು ಸಹ ಸರ್ಕಾರದ್ದೇ ಕರ್ತವ್ಯವೆಂದು ಭಾವಿಸಿರುವುದು. ಇಂದು ನಾವು ಆಲೋಚಿಸುತ್ತಿರುವ ಮಟ್ಟ ಎಂಥಹದೆಂದರೆ, ನಮ್ಮ ಮನೆಯ ಒಳಗಿನ ಸ್ವಚ್ಚತೆ ಕಾಪಾಡಿಕೊಳ್ಳುವುದು ಮಾತ್ರ ನಮ್ಮ ಜವಾಬ್ಧಾರಿ ಮನೆಯ ಹೊರಗಿನ ಎಲ್ಲಾ ಕಾರ್ಯಗಳನ್ನು ಮಾಡುವುದು ಸರ್ಕಾರಕ್ಕೆ ಸೇರಿದ್ದು ಎಂಬ ಗಟ್ಟಿಯಾದ ಮನೋಭಾವನೆ ಬೆಳೆಸಿಕೊಂಡುಬಿಟ್ಟಿದ್ದೇವೆ. ಹೆಜ್ಜೆ-ಹೆಜ್ಜೆಗೂ ನಿಸರ್ಗ ಮಾತೆಯ ಪಾವಿತ್ರತೆಯನ್ನು ಹಾಳುಮಾಡುತ್ತಿರುವ ನಾವು ಅದರ ಸಂರಕ್ಷಣೆಯ ಹೊಣೆಯನ್ನು ಮಾತ್ರ ಸರ್ಕಾರಕ್ಕೆ ಬಿಟ್ಟಿದ್ದೇವೆ. ವರ್ಷಾನುವರ್ಷದಿಂದ ಬೇರುಬಿಟ್ಟು ಗಟ್ಟಿಯಾಗಿ ನಿಂತಿದ್ದ ಎಷ್ಟೋ ಮರಗಳನ್ನು ಕಡಿದು ಅಲ್ಲಿ ದೊಡ್ಡ-ದೊಡ್ಡ ವಸತಿ ಸಮುಚ್ಚಯಗಳು, ವಿವಿದ ಖಾಸಗಿ ಸಂಸ್ಥೆಗಳು ತಲೆಯೆತ್ತಿವೆ ಇದಕ್ಕೆ ನಾವು ನೀಡಿರುವ ಹೆಸರು "ಅಭಿವೃದ್ದಿ" ಎಂದು. ಇದರಿಂದ ಅನೇಕ ಜನರಿಗೆ ಕೆಲಸವೇನೋ ಸಿಗುತ್ತಿದೆ ಆದರೆ ಪ್ರಕೃತಿಯ ನಾಶದಿಂದಾಗಿ ಇಂದು ನಾವು ಬದುಕುತ್ತಿರುವುದದರು ಹೇಗೆ? ಎಷ್ಟು ಬಗೆಯ ಖಾಯಿಲೆಗಳಿಗೆ ತುತ್ತಾಗಿದ್ದೇವೆ, ಎಷ್ಟು ಒತ್ತಡದ ಬದುಕು ಸಾಗಿಸುತ್ತಿದ್ದೇವೆ? ಸರ್ಕಾರವೆಂದರೆ ನಾವು, ನಾವೆಂದರೆ ಸರ್ಕಾರ ಎಂದು ಹೇಳುವ ನಾವು ರಾಜಕೀಯ ವ್ಯಕ್ತಿಗಳನ್ನು ದೂರುವಾಗ ನಮ್ಮಿಂದಲೇ ಅವರು ಎನ್ನುವ ನಾವು, ನಾವು ವಾಸಿಸುತ್ತಿರುವ ಸುತ್ತ-ಮುತ್ತಲಿನ ಪರಿಸರ ಸಂರಕ್ಷಣೆಯೂ ನಮ್ಮದೆಂದು ಏಕೆ ತಿಳಿಯುವುದಿಲ್ಲ? ನಮ್ಮ ಪೂರ್ವಿಕರು ನೈಸರ್ಗಿಕ ಸಂಪನ್ಮೂಲಗಳ ಮಹತ್ವವನ್ನು ಅರಿತ್ತಿದ್ದರು ಅದರಿಂದಲೇ ನಮಗೆ ಇಂಥಹ ಬದುಕು ಸಿಕ್ಕಿದೆ, ಆದರೆ ಇಂದಿನ ಬಹುಮಂದಿ ಜನರಿಗೆ ಇದರ ಅರಿವೇ ಇಲ್ಲ. ದಿನನಿತ್ಯ ವಾಹನಗಳು ಹೊರಸೂಸುವ ಹೊಗೆ, ಅದರಿಂದಾಗುತ್ತಿರುವ ದುಷ್ಪರಿಣಾಮಗಳು, ಸೇವಿಸಲು ಶುದ್ದ ಗಾಳಿಯೇ ಸಿಗದಂತಾಗುವ ಪರಿಸ್ಥಿತಿ ಬಂದೊದಗುವ ಭೀತಿ, ಅನೇಕ ರೀತಿಯ ರಾಸಾಯನಿಕಗಳ ಬಳಕೆಯಿಂದ ಫಲವತ್ತತೆಯನ್ನು ಕಳೆದುಕೊಳ್ಳುತ್ತಿರುವ ಭೂಮಿ, ಕುಸಿಯುತ್ತಿರುವ ಅಂತರ್ಜಲದ ಮಟ್ಟ, ಜಲಕ್ಷಾಮ ತಲೆದೋರುವ ದಿನಗಳು ಬಹಳ ದೂರವೇನಿಲ್ಲ.
ಒಂದು ಆರೋಗ್ಯಕರ ಸಮಾಜಕ್ಕೆ ಶುದ್ದ ಕುಡಿಯುವ ನೀರಿನ ಅವಶ್ಯಕತೆ ಇದೆ ಆದರೆ ಇಂದು ಶುದ್ದ ಕುಡಿಯುವ ನೀರಿಗಾಗಿ ಹಳ್ಳಿ- ನಗರಗಲ್ಲಿ ಪರದಾಡುವ ಸ್ಥಿತಿ ಇದೆ. ನದಿ, ನಾಲೆ, ಸರೋವರಗಳು ಮಲಿನಗೊಂದು ಪರಿಸರದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿವೆ. ನೀರಿನ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಇನ್ನು ನಾವು ಅರಿಯದೆ ಹೋಗಿದ್ದೇವೆ. ಇನ್ನು ಬಹುತೇಕ ಪ್ರವಾಸಿ ತಾಣಗಳಲ್ಲಿ ಮತ್ತು ದಿನ ನಿತ್ಯ ನಾವು ಓಡಾಡುವ ಸ್ಥಳಗಳಲ್ಲಿ ಕಂಡುಬರುವ ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರಕ್ಕೆ ಮಾರಕವಾಗಿರುವ ಮಹಾರಾಕ್ಷಸ ಇನ್ನಬಹುದು. ಪ್ಲಾಸ್ಟಿಕ್ ತ್ಯಾಜ್ಯಗಳು ಭೂಮಿ  ಸೇರುವುದರಿಂದ ಮಳೆ ನೀರು ಭೂಮಿಯ ಒಳಗೆ ಹೋಗದಂತೆ ತಡೆಯುತ್ತದೆ ಇದರಿಂದಾಗಿ ಅಂತರ್ಜಲದ ಮಟ್ಟ ಕುಸಿಯುತ್ತದೆ, ಸಸ್ಯಗಳು ಆಳವಾಗಿ ಬೇರುಬಿಡಲು ಇವು ಅಡ್ಡಿಯಾಗುತ್ತವೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದಿದ್ದರೂ ಕನಿಷ್ಠ ಪಕ್ಷ ಅದರ ಬಳಕೆಯನ್ನಾದರೂ ಕಡಿಮೆಮಡೋಣ..ಪರಿಸರಸ್ನೇಹಿ ವಸ್ತುಗಳನ್ನು ಬಳಸೋಣ.
ಎಲ್ಲದಕ್ಕೂ ಸರ್ಕಾರವನ್ನು ದೂರುವುದು ಎಷ್ಟು ಸಮಂಜಸ? ಪ್ರತಿ ವ್ಯಕ್ತಿಯಲ್ಲಿ ಇಂದು ನಮ್ಮ ಭೂಮಿ, ನಾವು ಬದುಕುತ್ತಿರುವ ಪರಿಸರ, ಇದರ ಸಂರಕ್ಷಣೆಯ ಹೊಣೆಯಲ್ಲಿ ನಮ್ಮದು ಪಾಲಿದೆ ಇಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ನಾವು ಬದುಕುತ್ತಿರುವ ಸುಂದರ ನಾಡನ್ನು ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಬಿಟ್ಟುಹೊಗೋಣ. ಭೂಮಿಯ ಮೇಲೆ ನೆಡೆಯುತ್ತಿರುವ ದೌರ್ಜನ್ಯವನ್ನು ಒಮ್ಮೆ ಯೋಚಿಸಿ ನೋಡಿ. ಈಗಾಗಲೇ ಕಾಡುಗಳ ನಾಶದಿಂದಾಗಿ ಗ್ಲೋಬಲ್ ವಾರ್ಮಿಂಗ್ ಇನ್ನುವ ಭೂತ ಕಣ್ಣ ಮುಂದೆಯೇ ಕುಣಿಯುತ್ತಿದೆ, ಅಕಾಲಿಕ ಮಳೆ, ಬೆಳೆ ನಾಶ, ಸಾರ್ವಜನಿಕ ಜೀವನ ಅಸ್ತ-ವ್ಯಸ್ತ ಮುಂತಾದವುಗಳ ಪರಿಣಾಮ ಎಂಥಹದೆಂದು ಈಗಾಗಲೇ ಅನುಭವಿಸಿದ್ದೇವೆ. ಇನ್ನಾದರೂ ಪರಿಸರ ಸಂರಕ್ಷಣೆಗೆ ಮುಂದಾಗೋಣ. ಈಗ ಹೇಳಿ ನಮಗೆ ಉಸಿರಾಡಲು ಗಾಳಿ, ಕುಡಿಯಲು ನೀರು, ಬದುಕಿಗೊಂದು ನೆಲೆ ನೀಡಿರುವ ನಿಸರ್ಗ ಮಾತೆಗೆ ನಾವು ಎಷ್ಟು ಆಭಾರಿಯಾಗಿದ್ದೇವೆ?? 

25 November 2011

ನಾವು ಮತ್ತು ನಮ್ಮ ಸಾಮಾಜಿಕ ಜವಾಬ್ಧಾರಿ !!!



ಬಹಳ ದಿನಗಳಾಯಿತು ನನ್ನ ಬ್ಲಾಗ್ ಬರೆದು...ಏನಾದ್ರು ಬರೆಯಬೇಕೆನ್ನುವ ಹಂಬಲ ಆದರೆ ಸಮಯದ ಅಭಾವ...ಆಫೀಸ್ ಕೆಲಸ, ಪಿ.ಎಚ್ ಡಿ ಕೆಲಸಗಳ ಮದ್ಯೆ ಬರೆಯಲು ಬಿಡುವೆ ಇಲ್ಲದಂತಾಗಿದೆ, ಆದರೂ ನನ್ನ ಕೆಲ ಗೆಳೆಯರನ್ನು ನೋಡಿದರೆ ಬಹಳ ಆಶ್ಚರ್ಯ ಮತ್ತು ಸಂತೋಷವಾಗುತ್ತದೆ ಕಾರಣ ತಮ್ಮ ಕೆಲಸದ ಒತ್ತಡದಲ್ಲಿಯೂ ಅವರ ಬರವಣಿಗೆಗಳನ್ನು ಓದುವ ಭಾಗ್ಯ ನನಗೆ ಸಿಗುತ್ತಿರುತ್ತದೆ ಎಂದು...
ಅಂದ ಹಾಗೆ ವಿಷಯಕ್ಕೆ ಬರುತ್ತೇನೆ ಪ್ರತಿ ಶನಿವಾರ ನನ್ನ ಪಿ.ಎಚ್.ಡಿ ಗೈಡ್ ನೋಡಲು ಮೈಸೂರಿಗೆ ಹೊಗಿಬರುತ್ತಿರುತ್ತೇನೆ, ಹೆಚ್ಚಾಗಿ ಟ್ರೈನ್ ನಲ್ಲಿಯೇ ಪ್ರಯಾಣಿಸುತ್ತಿರುತ್ತೇನೆ. ಪ್ರತಿ ಬಾರಿ ಇಲ್ಲಿಂದ ಹೊರಡುವಾಗ ಮತ್ತು ಮೈಸೂರಿನಿಂದ ಬರುವ ನಾನು ಯೋಚಿಸುವುದು ಒಂದೇ ವಿಚಾರ...ಅದು ಟ್ರೈನ್ ನ ಸ್ವಚ್ಚತೆ ಬಗ್ಗೆ...ಹೌದು ಮೈಸೂರಿನಿಂದ ಟೈನ್ ಹತ್ತುವಾಗ ಇರುವ ಖುಷಿ ನನಗೆ ಇಳಿಯುವಾಗ ಸಿಗುವುದಿಲ್ಲ...ನಮ್ಮ ಜನರು ತಾವು ತಮ್ಮ ಉಪಯೋಗಕ್ಕಾಗಿ ಬಳಸುವ ಸಾರ್ವಜನಿಕ ವಸ್ತುಗಳನ್ನ ಏಕೆ ಇಷ್ಟು ಉಡಾಫೆತನದಿಂದ ನೋಡುತ್ತಾರೆ ಎಂದು ತಿಳಿದಿಲ್ಲ...ಟ್ರೈನ್ ಹತ್ತುವಾಗ ಅದರ ಸ್ವಚ್ಚತೆ ನೋಡಿದರೆ ನಿಜವಾಗಿಯೂ ಖುಷಿ ಎನಿಸುತ್ತದೆ ಆದರೆ ಆ ಖುಷಿ ಬಹಳ ಸಮಯ ಉಳಿಯುವುದಿಲ್ಲ...ಟ್ರೈನ್ ನಲ್ಲಿ ಮಾರಿಕೊಂಡು ಬರುವ ಹೆಚ್ಚು-ಕಡಿಮೆ ಪ್ರತಿಯೊಂದು ತಿಂಡಿ-ತಿನಿಸನ್ನು ಕೊಂಡು ತಿನ್ನುವ ಬಹಳಷ್ಟು ಜನರು ಕಸ ಎಂದು ಎನಿಸಿಕೊಳ್ಳುವ ವಸ್ತುಗಳನ್ನ ತಾವು ಕುಳಿತಲ್ಲೇ ಹಾಕುವುದನ್ನು ನೋಡಬಹುದು...ಕಡಲೆ ಕಾಯಿ ತಿಂದು ಅದರ ಸಿಪ್ಪೆಯನ್ನು ಕಾಲ ಬಳಿಯಲ್ಲಿಯೇ ಹಾಕುವುದಲ್ಲದೆ ಸಿಪ್ಪೆಗಳು ಎದುರಿಗೆ ಕುಳಿತಿರುವ ವ್ಯಕ್ತಿಯ ಪಾದಗಳನ್ನೂ ಸಹ ತೊಳೆಯುತ್ತಿರುತ್ತವೆ...ಇನ್ನು ಮದ್ದೂರ್ ವಡೆ ತಿಂದ ಪೇಪರ್, ಕಾಫಿ-ಟೀ ಕುಡಿದ ಪೇಪರ್ ಕಪ್ ಅನ್ನು ಕಿಟಕಿ ಪಕ್ಕ ಕುಳಿತವರು ಹೊರಗೆ ಹಾಕಿದರೆ ಕೆಲವರು ಏಳಲು ಕಷ್ಟ ಎನ್ನುವ ಮಟ್ಟಿಗೆ ಅದನ್ನು ಅಲ್ಲಿಯೇ ಹಾಕಿ ಬಿಡುತ್ತಾರೆ...
ಇದು ಕೆಳಗೆ ಕುಳಿತವರ ಕಥೆಯಾದರೆ ಇನ್ನು ಮೇಲೆ ಅಂದರೆ ಅಪ್ಪರ್ ಬರ್ತ ನಲ್ಲಿ ಕುಳಿತುಕೊಳ್ಳುವವರ ಕಥೆ ಕೇಳಿ..ಪಾಪ ಮೇಲೆ ಹತ್ತಿ ಕುಳಿತುಕೊಳ್ಳುವ ಕೆಲವವು ಮಹಾಶಯರಿಗೆ ತಮ್ಮ ಚಪ್ಪಲಿ-ಶೂಗಳದ್ದೇ ಚಿಂತೆ ಎಲ್ಲಿ ಕೆಳಗೆ ಬಿಟ್ಟರೆ ಯಾರದ್ರು ಕದ್ದು ಬಿಡುತ್ತಾರೋ ಎಂಬ ಭಯ ಅದಕ್ಕರಾಗಿ ಇವರು ಮೇಲೆ ಹತ್ತುವಾಗ ಚಪ್ಪಲಿ ಶೂ ಹಾಕಿ ಕೊಂಡಿಯೇ ಹತ್ತುವುದು...ಕೆಲವರು ಹತ್ತಿ ಅವಗಳನ್ನು ಬಿಚ್ಚಿ ಕಾಲುಗಳ ಹತ್ತಿರ ಇಟ್ಟುಕೊಂಡರೆ ಇನ್ನು ಕೆಲವರು ಬಿಚ್ಚದೆ ಹಾಕಿಕೊಂಡಿಯೇ ಮಲಗುತ್ತಾರೆ...ಓಡಾಡುವ ಜನರು ತಮ್ಮ ಚಪ್ಪಲಿ-ಶೂ ಕಾಲುಗಳ ದರ್ಶನ ಮಾಡಿ ಕೊಳ್ಳಲಿ ಎಂದು...ನಾವು ಇಳಿದ ಮೇಲೆ ಬೇರೊಬ್ಬರು ಇಲ್ಲಿ ಕುಳಿತುಕೊಳ್ಳಲೋ  ಇಲ್ಲ ಮಲಗಲೋ ಈ ಸೀಟ್ ಅನ್ನು ಉಪಯೋಗಿಸುತ್ತಾರೆ ಎಂಬ ಜ್ಞಾನವೇ ಇರುವುದಿಲ್ಲ.. ಇನ್ನು ಮಲಗುವ ಪರಿ ಕಾಲು ಹಾಕುವ ಜಾಗದಲ್ಲಿ ತಲೆ, ತಲೆ ಇಡುವ ಜಗದಲ್ಲಿ ಕಾಲು ಇಟ್ಟು ಮಲಗುತ್ತಾರೆ. ಪಾಪ ಇನ್ನ್ಯಾರೋ ಬಂದು ತಲೆ ಇಡುವ ಜಾಗದಲ್ಲಿ ತಲೆಯನ್ನೇ ಇಟ್ಟು ಮಲಗಿಕೊಂಡರೆ ಅಷ್ಟೇ ಇದಕ್ಕೂ ಮೊದಲು ಅಲ್ಲಿ ಕಾಲು ಇಟ್ಟು ಮಲಗಿದ್ದವನ ಪಾದದ ದೂಳಿನ ಸ್ಪರ್ಶ....ಇನ್ನು ಆಶ್ಚರ್ಯದ ವಿಚಾರ ಎಂದ ಹೆಚ್ಚು ಜನ ಇಂತಹವರಲ್ಲಿ ವಿದ್ಯಾವಂತರೇ ಆಗಿದ್ದಾರೆ...ಇದೆಲ್ಲ ದರ್ಶನದ ಅಜೋತೆಗೆ ಇಳಿಯಲು ಬಂದಾಗ ನಿಮಗೆ ನೀವು ಮೊದಲು ನೋಡಿದ ಸ್ವಚ್ಚವಾದ  ಟ್ರೈನ್ ತಿಪ್ಪೆ ಗುಂಡಿಯಂತೆ ಕಾಣುತ್ತಿರುತ್ತದೆ.
ಇದೆಷ್ಟು ಟ್ರೈನ್ ಕಥೆಯಾದರೆ ಇನ್ನು ನಮ್ಮ ಬೃಹತ್ ಬೆಂಗಳೂರಿನ ಕಥೆಯು ಅಷ್ಟೇ...ಅನೇಕ ಬಾರಿ  ಬಿ ಎಮ್ ಟಿ ಸಿ ಬಸ್ ನಲ್ಲಿ  ಪ್ರಯಾಣಿಸುವಾಗ ನಾನು ಇಂತಹ ದೃಶ್ಯಗಳನ್ನು ಕಂಡಿದ್ದೇನೆ...ಮಹಿಳೆಯರು ಬಸ್ಸಿನಲ್ಲಿಯೇ ತಾವು ಅಂದಿನ ಅಡಿಗೆಗೆಂದು  ಖರೀದಿಸಿದ ತರಕಾರಿ, ಸೊಪ್ಪನ್ನು ಸ್ವಚ್ಚಗೊಳಿಸುತ್ತ ಕೋರುವುದು...ಮೊನ್ನೆ ಕೂಡ ಇಂತಹದ್ದೇ ದೃಶ್ಯ...ಮಹಿಳೆಯೊಬ್ಬಳು ತಾನು ಕೊಂಡಿದ್ದ ಸೊಪ್ಪನ್ನು ಬಸ್ಸಿನಲ್ಲಿಯೇ ಸ್ವಚ್ಚ ಮಾಡುತ್ತಾ ಕುಳಿತಿದ್ದರು...ನಾನು ಎದುರಿಗೆ ನಿಂತಿದ್ದ ಕಾರಣ ಅವರು ನನ್ನನು ನಾನು ಅವರನ್ನು ನೋಡುತ್ತಿದ್ದೆವು, ಆಕೆ ಸೊಪ್ಪನ್ನು ಬಿಡಿಸಿ ಚೆನ್ನಾಗಿರುವುದನ್ನು ಕವರ್ ಗೆ ಹಾಕಿ ಕೊಳ್ಳುತ್ತಾ ಚೆನ್ನಗಿಲ್ಲದನ್ನು ಒಮ್ಮೆ ಕೆಳಗೆ ಮತ್ತೆಮ್ಮೋ ಕಿಟಕಿಯಿಂದ ಆಚೆಗೆ ಹಾಕುತ್ತಿದ್ದಳು....ಇದನ್ನು ನೋಡುತ್ತಾ ನಿಂತಿದ್ದ ನಂಗೆ ಕೋಪ ಬರುತ್ತಿರುವುದನ್ನು ಗಮನಿಸಿದ ಅಆಕೆ ತನ್ನೆ ಕೆಲಸವನ್ನೂ ಮುದುವರೆಸುತ್ತಿದ್ದಳು...ಆಕೆ ಹಾಕುತ್ತಿದ್ದ ಕಸ ಕಿಟಕಿಯಿಂದ ಹೊರಗೆ ಯಾವುದೊ ಒಬ್ಬ ವಾಹನ ಸವಾರನ ಮೇಲೆ ಬಿಳುತ್ತಿರಬಹುದೆಂಬ ಪರಿವೆ ಇಲ್ಲವೇ?? ನಾನು ಒಪ್ಪುತ್ತೇನೆ ಮನೆ ಹೊರಗು-ಒಳಗೂ ದುಡಿಯುವ ಮಹಿಳೆಗೆ ಇರುವ ಕಷ್ಟ ಮತ್ತು ಸಮಯದ ಅಭಾವವಿದೆ ಎಂದು....ನಾನು ಕೇಳುವ ಪ್ರಶ್ನೆ ಬಸ್ ವ್ಯವಸ್ಥೆಯಿಲ್ಲದ್ದರೆ ಸರ್ಕಾರವನ್ನು ದೂರುವ ನಾನು ನಮಗೆಂದೇ ಇರುವ ಬಸ್, ಟ್ರೈನ್ ಸಾರ್ವಜನಿಕ ಸ್ವತ್ತುಗಲ್ಲನ್ನು ನಾವು ನೋಡಿಕೊಳ್ಳುವ ರೀತಿ ಇದೇನಾ? ಪ್ರತಿಯೊಂದಕ್ಕೂ ಸರ್ಕಾರವನ್ನು ದೂರುವ, ಬೈಯ್ಯುವ ನಾವು...ನಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಯಾವಾಗ?? ಇದಕ್ಕೆನಾದ್ರು ಒಂದು ಇಲಾಖೆಯನ್ನು ನೇಮಿಸಬೇಕೆ??ಸಾಮಾಜಿಕ ಜವಾಭ್ದಾರಿ ಎಂಬುದನ್ನು ಬಲವಂತವಾಗಿ ನಮ್ಮಲ್ಲಿ  ತುಂಬಬೇಕೇ? ಎಲ್ಲ ಎಚ್ಚರಿಸಬೇಕೆ?? ಟ್ರೈನ್ ನಲ್ಲಿಯೇ ತಿಂದು ಅಲ್ಲಿಯೇ ಹಾಕುವ ಜನರು...ಬಸ್ಸಿನಲ್ಲಿಯೇ ಕಸ ಹಾಕುವ ಜನರು ತಮ್ಮ  ಮನೆಗಳಲ್ಲಿಯೂ ಹೇಗೆ ನೆದೆದುಕೊಲ್ಲುತ್ತರೆಯೇ ??
ಒಮ್ಮೆ ಯೋಚಿಸಿ ಎಲ್ಲದಕ್ಕೂ ನಾವು ಸರ್ಕಾರರವನ್ನು ದೂರುತ್ತೇವೆ.....ನಮಗೆ ಸೌಲಭ್ಯ ನೀಡಿಲ್ಲ ..ಅದಿಲ್ಲ ಇದಿಲ್ಲ ಎಂದು ಆದರೆ ಇರುವ ಸವಲತ್ತುಗಳನ್ನೂ ಎಷ್ಟರ ಮಟ್ಟಿಗೆ ಜೋಪನಮಾಡಿದ್ದೇವೆ...ಇಲ್ಲ ಅವುಗಳ ರಕ್ಷಣೆ ನಮ್ಮ ಹೊಣೆ ಎಂದು ಎಂದಾದರೂ ನೆದಡಿದುಕೊಂದಿದ್ದೆವೆಯೇ...??

20 July 2011

ಟಿವಿ ಕಾರ್ಯಕ್ರಮಗಳು ಮತ್ತು ನಮ್ಮ ಅಭಿಪ್ರಾಯ


ಹಿಂದೆ ವಾರಕ್ಕೊಮ್ಮೆ ಬರುತ್ತಿದ್ದ ಧಾರಾವಾಹಿಗಳು ---- ಅಯ್ಯೋ ಹಿಂದಿನ ವಾರ ಏನಾಯಿತೆಂದು ಮರೆತು ಹೋಗುತ್ತೇವೆ. ಆದರು ಚೆನ್ನಾಗಿರುತ್ತಿದ್ದವು....
ಮೆಗಾ ಧಾರವಾಹಿಗಳು ---- ದಿನಾ ನೋಡುವುದು ಕಷ್ಟ ಕಾರಣ, ನೆನ್ನೆ ಎಪಿಸೋಡ್ ಅನ್ನೇ ಎಳೆಯುತ್ತಿರುತ್ತಾರೆ.....
ಮಾಯಾಮೃಗ, ಮಲೆಗಳಲ್ಲಿ ಮಧುಮಗಳು ಇತ್ಯಾದಿ ಯಂತಹ ಧಾರಾವಾಹಿಗಳು ಮತ್ತೆ ಬರುವುದಿಲ್ಲ.
ನಗೆ ಧಾರವಹಿಗಳು ---- ನೋಡುತ್ತಿರುತ್ತೇವೆ ಆದರು ನಗು ಬರುವುದಿಲ್ಲ
ರಿಯಾಲಿಟಿ ಶೋಗಳು ----- ಒಂದು ಚಾನೆಲ್ ಮೇಲೆ ಮತ್ತೊಂದು ಚಾನೆಲ್ ಸ್ಪರ್ಧೆಗಿಳಿದಂತೆ ಬರಿ TRP ಹೆಚ್ಚಿಸಿಕೊಳ್ಳಲು ಮಾಡುವ ಗಿಮಿಕ್ಕು,  
ಫ್ಯಾಶನ್ ಷೋಗಳು ------ ಎಂಥಹ ಕಾಲ ಬಂತಪ್ಪ...ಬಟ್ಟೆಗೆ ಬರ ???
ಟಿವಿ ನ್ಯೂಸ್ ಗಳು ------ ಅಯ್ಯೋ ಹೇಳಿದ್ದನ್ನೇ ಹೀಳುತ್ತಿರುತ್ತವೆ...ತೋರಿಸಿದ್ದನ್ನೇ ತೋರಿಸುತಿರುತ್ತವೆ.....ಹೊಸ ಸುದ್ದಿಯೇ ಇಲ್ಲವೇ ಇವರಿಗೆ....
ನ್ಯೂಸ್ ಚಾನೆಲ್ –----- ವಿವಿಧ ಪಕ್ಷಗಳ ರಾಜಕೀಯ ವ್ಯಕ್ತಿಗಳ ಜೊತೆಗಿನ ಚರ್ಚೆ ಮತ್ತು ಸಂಭಾಷಣೆ ------ ಅಯ್ಯೋ ದಿನ ಇವರುಗಳು  ಮಾಡುವುದನ್ನು ನಾವು ಪರೋಕ್ಷವಾಗಿ ನೋಡುತ್ತಿಲವೇ ಈಗ ಇವರ ಜಗಳವನ್ನು ಅದಕ್ಕೆ ವಿವರಣೆಯನ್ನ ನೇರವಾಗಿ ನೋಡಬೇಕೆ ??
ಬೃಹತ್ ಬ್ರಹ್ಮಾಂಡ ------ ಕರ್ಮ ಕಾಂಡ....
ಬದುಕು ಜಟಕಾಬಂಡಿ ----- ಸರ್ಕಾರೀ ಕೌಟುಂಬಿಕ ನ್ಯಾಯಾಲಯದ ಜೊತೆಗೆ ಸ್ಪರ್ದೆ....ಯಾರು ಹೆಚ್ಚು ಕೇಸು ಮುಗಿಸುತ್ತಾರೆ ಎಂಬಂತೆ...  
ಇನ್ನು ವಾರದ ಕೊನೆಯಲ್ಲಿ ಹಾಕುವ ಚಲನಚಿತ್ರಗಳು ------ ಹಾಕಿದ್ದನ್ನೇ ಹಾಕುತ್ತಾರೆ ಜೊತೆಗೆ ಅಯ್ಯೋ ಎರಡುವರೆ ಘಂಟೆಯಲ್ಲಿ ಮುಗಿಯುವ ಸಿನಿಮ ನೋಡಲು ಮೂರುವರೆ ಗಂಟೆ ಕೂತು ಯಾರು ನೋಡುತ್ತಾರೆ. 

27 May 2011

ನಮಗಿರುವ ಕನ್ನಡ ಭಾಷಾ ಅಭಿಮಾನವೆಷ್ಟು ???

ಊಹಿಸಲು ಅಸಾಧ್ಯ ಮಾಧ್ಯಮಗಳು ಇಂತಹ ಕಾರ್ಯಕ್ರಮಗಳನ್ನು ಮನರಂಜನೆ ಎಂಬ ಹೆಸರಿನಲ್ಲಿ ಪ್ರದರ್ಸಿಸುತ್ತಿರುವುದು. ಒಂದು ಕಡೆ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನ ಸಿಕ್ಕರೂ ಕನ್ನಡಕ್ಕಾಗಿ, ಭಾಷೆಯ ಉಳಿಯುವಿಕೆಗಾಗಿ ಅನೇಕ ಸಂಘಟನೆಗಳು ಕಾರ್ಯನಿರತವಾಗಿದ್ದರೆ ಮತ್ತೊಂದು ಕಡೆ ನಮ್ಮವರೇ ಕನ್ನಡ ಭಾಷೆಯನ್ನೂ ಹೇಗೆ ಬೇಕೋ ಹಾಗೆ ಅತಿ ಕೆಟ್ಟದಾಗಿ ಬಳಸುತ್ತ ಅದಕ್ಕೆ ಇರುವ ಪ್ರಾಮುಕ್ಯತೆಯನ್ನು ಮರೆತಿದ್ದಾರೆ.

ಇತ್ತೀಚಿಗೆ ರೇಡಿಯೋ FM ಗಳು ಒಂದರ ಮೇಲೊಂದು ಸ್ಪರ್ಧೆಗಿಳಿದಂತೆ ಹೊಸ ಹೊಸ ಕಾರ್ಯಕ್ರಮಗಳನ್ನೂ ತರುತ್ತಿದ್ದು ಜನರನ್ನು ಆಕರ್ಷಣೆಯೇ ಮುಖ್ಯ ಗುರಿಯಾಗಿರಿಸಿಕೊಂಡು ತಾವು ಮಾತನಾಡುತ್ತಿರುವ ಭಾಷೆಯಲ್ಲಿ ಬಳಸುತ್ತಿರುವ ಪದಗಳ ಅರಿವೇ ಇಲ್ಲದಂತಾಗಿದೆ. FEVER 104 FM ನ ಮಿಂಚು ಮಿನುಗು ನೀತಿ ಮತ್ತು ನಾಟಿ ನವೀನ ಶೋ ನಲ್ಲಿ ಅವರಿಬ್ಬರು ಬಳಸುವ ಪದಗಳು ಮತ್ತು ಕನ್ನಡದ ಹೆಸರಾಂತ ನಟಿ ಕಲ್ಪನಾರ ದ್ವನಿಯಲ್ಲಿ ಮಾತನಾಡುವ ಮೋನ ಎಂಬ ದ್ವನಿ ನವೀನ ಮತ್ತು ಮೋನರ ನಡುವೆ ನಡೆಯುವ ಸಂಬಾಷಣೆ ಕೇಳಿ, ಸಾವಿರಾರು ಜನರು ನಮ್ಮನ್ನು ಆಲಿಸುತ್ತಿದ್ದರೆ ಎಂಬ ಅರಿವಿಲ್ಲದವರಂತೆ ಅಶ್ಲೀಲ ಪದಗಳ ಬಳಸಿ ನಂತರ ಅದಕ್ಕೆ ಬೇರೆ ರೀತಿಯ ಸಂಭಾಷಣೆ ನೀಡುವ ಇವರನ್ನು ಏನೆಂದು ಕರೆಯಬೇಕು? ಮನರಂಜನೆಯ ಹೆಸರಿನಲ್ಲಿ ಇದನ್ನ್ನು ಮಾಡುವುದು ಎಷ್ಟು ಸರಿ? ಇದನ್ನು ಕೇಳುವ ನಾವು ಅವರು ಮಾಡಿದ್ದೆ ಮನರಂಜನೆ ಎಂದು ಕೇಳಿ ಸುಮ್ಮನಾಗುವುದು ಏಕೆ? ಕನ್ನಡ ಸಿನಿಮ ಜಗತ್ತು ಅಷ್ಟೇ ಅಲ್ಲ ಕರ್ನಾಟಕ ಜನತೆ ಗೌರವದಿಂದ ಕಾಣುವ ಕಲ್ಪಾನರ ದ್ವನಿ ಅನುಸರಿಸು ಅಶ್ಲೀಲವಾಗಿ ಮಾತನಾಡುವ ಇಂಥಹ ಒಂದು ಷೋ ಅನ್ನು ಯಾರು ವಿರೋಧಿಸದೆ ಇರುವುದು ಹೇಗೆ? ಯಾರೋ ಹೊರಗಿನ ಜನತೆ ಕನ್ನಡ ಭಾಷೆಯನ್ನೂ ಹೀಯಾಳಿಸಿದರು, ಎಂದು ಹೋರಾಟಕ್ಕೆ ಇಳಿಯುವ ನಾವು ಇಂಥಹವನೆಲ್ಲ ಏಕೆ ಸಹಿಸಿಕೊಳ್ಳಬೇಕು? ಕೊನೆ ಪಕ್ಷ ಅಲ್ಲಿಯೇ ಕೆಲಸಮಾಡುವ ಕನ್ನಡಿಗರಿಗಾದರೂ ಇದರ ಅರಿವುಬೇಡವೇ?

ಇದು ರೇಡಿಯೋ ಪುರಾಣವಾದರೆ ಇನ್ನು ಜೀ ಟಿವಿ ಯಲ್ಲಿ ಪ್ರಸಾರವಾಗುವ ಪರದೇಶದಲ್ಲಿ ಪರದಾಟ ರಿಯಾಲಿಟಿ ಶೋವ್ನಲ್ಲಿ ನೆನ್ನೆ ನೋಡಿದ ಒಂದು ದೃಶ್ಯ, ಷೋ ನಲ್ಲಿ ಭಾಗವಹಿಸಿರುವವರನ್ನ ಇಲ್ಲಿಂದ ವಿದೇಶಕ್ಕೆ ಕದೆದುಕೊಂಡು ಹೋಗಿ ಅಲ್ಲಿ ವಿದೇಶಿಗರ ಮುಂದೆ ಕನ್ನಡ ಹಾಡುಗಳನ್ನೂ ಹಾಡಿಸುತ್ತ ವಿದೇಶಿಗರಿಂದ ದುಡ್ಡು ಕೇಳುವ ಟಾಸ್ಕ್... ಒಂದೇ ಮಾತಿನಲ್ಲಿ ಹೇಳುವುದಾದರೆ ವಿದೇಶಿಗರ ಮುಂದೆ ಬಿಕ್ಷೆ ಬೇಡಿ ಯಾರು ಹೆಚ್ಚು ದುಡ್ಡು ಸಂಪಾದಿಸುತ್ತರೋ ಅವರು ಗೆಲ್ಲುತ್ತಾರೆ...ಇಂಥಹ ಶೋಗಳನ್ನು ಪ್ರಸಾರ ಮಾಡುವಾಗ ಹಿಂದೆ-ಮುಂದೆ ಯೋಚಿಸದೆ ಇಷ್ಟ ಬಂದ ಟಾಸ್ಕ್ಗಳನ್ನೂ ಇಟ್ಟು ಆಡಿಸುವ ಅಗತ್ಯವಾದರು ಏನಿದೆ? ಕನ್ನಡ ಕನ್ನಡ ಇಂದು ಹೊಡೆದಾಡುವ ನಾವು ನಮ್ಮ ಭಾಷೆಗೆ ನೀಡುತ್ತಿರುವ ಗೌರವವಾದರೂ ಏನು? ಇನ್ನಾದರೂ ಮಾಧ್ಯಮಗಳು ಕೇವಲ ಹೆಸರು ಮಾಡುವ ಮತ್ತು TRP ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಮಾತ್ರ ನೋಡದೆ, ನಮ್ಮ ಭಾಷೆ, ಅದರ ಬಳಕೆ ಮತ್ತು ಪ್ರಮುಖ್ಯತೆಯನ್ನು ಅರಿತು ನೆಡೆದು ಕೊಳ್ಳುವುದು ಅಗ್ಯತ್ಯವಾಗಿದೆ....

10 January 2011

ವ್ಯಕ್ತಿ, ವ್ಯವಸ್ಥೆ ಮತ್ತು ಭಷ್ಟಾಚಾರ...

 ಸ್ನೇಹಿತರೆ ನನ್ನದೊಂದು ಸಣ್ಣ ಪ್ರಶ್ನೆ...ಪ್ರತಿ ದಿನ ನಾವು TV, ದಿನಪತ್ರಿಕೆಗಳಲ್ಲಿ ಭ್ರಷ್ಟಾಚಾರ, ಲಂಚ, ಹಗರಣಗಳು, ಇತ್ಯಾದಿ ಸಮಸ್ಯೆಗಳ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಆರೋಪ ಮತ್ತು ಪ್ರತ್ಯಾರೋಪಗಳನ್ನು ಕೇಳಿ ರೋಸಿಹೊಗಿದ್ದೇವೆ...ಇದಕ್ಕೆ ಸಂಭಂದಿಸಿದಂತೆ ನನ್ನ ಒಂದು ಸಣ್ಣ ಪ್ರಶ್ನೆಯೆಂದರೆ ವ್ಯಕ್ತಿಯಿಂದ ವ್ಯವಸ್ಥೆ ಹಾಳೋ? ಅಥವಾ ವ್ಯವಸ್ಥೆಯಿಂದ ವ್ಯಕ್ತಿ ಹಾಳೋ? ಹಾಳಾಗಿರೋ ವ್ಯವಸ್ಥೆಯಿಂದ ವ್ಯಕ್ತಿ ಹಾಳಗುತ್ತಿದ್ದನೋ ಅಥವಾ ವ್ಯಕ್ಥಿಯಿಂದಲೇ ವ್ಯವಸ್ಥೆ ಹಾಳಗುತ್ತಿದೆಯೋ? ಅನೇಕ ಜನರು ಮಾತನಾಡುವಾಗ...ಮಾತಿನ ಮಧ್ಯೆ ಅಯ್ಯೋ ಬಿಡಿ ನಮ್ಮ ವ್ಯವಸ್ಥೆಯೇ ಹಾಗಿದೆ, ಇಲ್ಲಿ ಲಂಚ ಕೊಡದೆ ಏನು ಆಗುವುದಿಲ್ಲ ಮತ್ತು ಲಂಚ ಪಡೆಯದೇ ಏನು ಮಾಡುವುದಿಲ್ಲ ಇನ್ನು ಜನರು ಬಹಳಷ್ಟು ಮಂದಿ ಇದ್ದಾರೆ.....ಲಂಚ ತೆಗೆದುಕೊಳ್ಳುವವನು ಒಬ್ಬ ವ್ಯಕ್ತಿ ಆದರೆ ಆ ವ್ಯಕ್ತಿಯ ಸುತ್ತಲು ವ್ಯವಸ್ಥೆ ಸುತ್ತುತಿರುತ್ತದೆ....ಇಲ್ಲ ವ್ಯವಸ್ಥೆಯೇ ಭ್ರಷ್ಟ ಎಂದಾದರೆ ಅದರೊಳಗಿನ ಎಲ್ಲಾ ವ್ಯಕ್ತಿಗಳು ಭ್ರಷ್ಟರೇ ಆಗಿರುತ್ತಾರೆ...ಇಡೀ ಭ್ರಷ್ಟ ವ್ಯವಸ್ಥೆಯಲ್ಲಿ ಭ್ರಷ್ಟರಲ್ಲದ ವ್ಯಕ್ತಿಗಳು ಹೇಗೆ ತಮ್ಮ  ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಬರುತ್ತಾರೆ ಎನ್ನುವುದು ಮುಖ್ಯವಾಗುತ್ತದೆ....ಒಂದು ಸಮಾಜದ ಅಭಿವೃದ್ದಿಗೆ ಅಥವಾ ಅಧಃಪತನಕ್ಕೆ ವ್ಯಕ್ತಿ ಮತ್ತು ವ್ಯವಸ್ಥೆ ಎರಡು ಕೂಡ ಜೊತೆ-ಜೊತೆಯಾಗಿ ಕಾರ್ಯ ನಿರ್ವಹಿಸುತ್ತವೆಯೇ?

ಇತ್ತೀಚಿಗೆ ನಡೆದ ಮತ್ತು ನೆಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಗೆ ಇದನ್ನು ಹೋಲಿಸಿ ನೋಡುವ ಒಂದು ಸಣ್ಣ ಪ್ರಯತ್ನ....ಭೂಹಗರಣಗಳಿಗೆ ಕುರಿತಂತೆ ಅನೇಕ ರಾಜಕೀಯ ವ್ಯಕ್ತಿಗಳು ತಮ್ಮ ಮೂಗಿನ ನೇರಕ್ಕೆ ಮಾತನಾಡಿದ್ದು ನಮೆಗೆಲ್ಲ ತಿಳಿದೇ ಇದೇ...ಯಡಿಯೂರಪ್ಪನವರು ಭೂಹಗರಣಗಳನ್ನು ಮಾಡಿದ ಮೊದಲ ವ್ಯಕ್ಥಿಯೇನಲ್ಲ ಅದಕ್ಕೆ ಹಿಂದೆ ಇದ್ದ JDS, Congress ಪಕ್ಷಗಳು ಕೂಡ ಇಂಥಹ ಹಗರಣಗಳನ್ನು ಮಾಡಿವೆ, ಯಾರೂ ಮಾಡದ್ದನ್ನ ನಾವೇನು ಮಾಡಿಲ್ಲ ಎಂಬುದು ಇವರ ದೂರುಗಳು...ಹಾಗಾದರೆ ಪ್ರಾಮಾಣಿಕವಾಗಿ ದುಡಿಯುವ ಪಕ್ಷ ಯಾವುದು?? ಪ್ರಾಮಾಣಿಕ ವ್ಯಕ್ತಿಗಳು ಯಾರು?? ಅಂದರೆ ಈ ಎಲ್ಲಾ ಹಗರಣಗಳ ಹಿಂದೆ ವ್ಯಕ್ತಿಗಳೇ ಇದ್ದರೂ ಸಹ ಇಡಿಯಾಗಿ ವ್ಯವಸ್ಥೆಯೇ ಭ್ರಷ್ಟ ಎನಿಸಿಬಿಡುತ್ತದೆ.....ಇಗ ನಾವು ವ್ಯವಸ್ಥೆಯನ್ನು ದೂರಬೇಕೋ ಅಥವಾ ವ್ಯವಸ್ಥೆಯನ್ನು ತಾನೆ ಸೃಷ್ಟಿಸಿ, ತಾನೆ ಅದನ್ನು ಹಾಳು ಮಾಡುವ ವ್ಯಕ್ಥಿಯನ್ನೋ?? ಇವೆರಡನ್ನೂ ಇಡಿಯಾಗಿ ನೋಡಿದರೆ ಕಾಣುವುದು ವ್ಯವಸ್ಥೆಯ ಹಿಂದೆ ಇರುವ ವ್ಯಕ್ತಿ ಮತ್ತು ವ್ಯಕ್ತಿಯ ಹಿಂದೆ ಇರುವ ವ್ಯವಸ್ಥೆ.... ವ್ಯವಸ್ಥೆಯನ್ನು ಸೃಷ್ಟಿಸಿದ ವ್ಯಕ್ತಿಯೇ ಅದನ್ನು ಹಾಳು ಮಾಡುತ್ತಿದ್ದಾನೆ... ನಮ್ಮ ಜನರು ಮಾತನಾಡುವಾಗ ಸಾಮಾನ್ಯವೇನೋ ಎಂಬಂತೆ ಹೇಳುವ ಅಭಿಪ್ರಾಯ...ನಮ್ಮ ದೇಶವನ್ನು ಹಾಳು ಮಾಡುತ್ತಿರುವವರು ರಾಜಕೀಯ ವ್ಯಕ್ತಿಗಳು ಎಂದು...ಎಲ್ಲಾ ತಪ್ಪುಗಳನ್ನು ರಾಜಕೀಯ ವ್ಯಕ್ತಿಗಳ ಮೇಲೆ ಹೇರುವುದು ಸರಿಯೇ??  ಇದರಲ್ಲಿ ನಮ್ಮ ಪಾಲೆಷ್ಟು ಅವರ ಭ್ರಷ್ಟಾಚಾರಕ್ಕೆ ನೇರವಾಗಿಯೋ ಅಥವ ಪರೋಕ್ಷವಾಗಿಯೋ ನಾವು ಸಹಕರಿಸುತ್ತಿಲ್ಲವೇ?? ನಾವು ಕೂಡ ಎಷ್ಟು ದುಡ್ಡು ಕೊಟ್ಟಾದರೂ ಸರಿ ನಮ್ಮ ಕೆಲಸವಾಗಬೇಕೆಂದು ಬಯಸುವುದಿಲ್ಲವೇ? ಅಂತೆಯೇ ಅವರು ಸಹ ತನಗೆ ಏನು ಸಿಗುತ್ತದೆಂದು ಯೋಚಿಸುವಾಗ ಕೇವಲ ಅವರನ್ನು ಮಾತ್ರ ಭ್ರಷ್ಟರೆಂದು ಕರೆದು ನಮ್ಮನ್ನು ಅವರಿಗೆ ಬಲಿಪಶುಗಳೆಂದು ಹೇಳಿಕೊಳ್ಳುವಲ್ಲಿ ಯಾವ ಅರ್ಥವೂ ಇಲ್ಲ..ಇಲ್ಲಿ ಎಲ್ಲರು ಬಯಸುವುದು ಸ್ವ-ಹಿತವನ್ನು ಮಾತ್ರ ಅಲ್ಲವೇ??? ಹಾಗಾದರೆ ಸಮಾಜದ ಹಿತವನ್ನು ಬಯಸುವವರು ಯಾರು??  ಇಂದು ಪ್ರಜಾಪ್ರಭುತ್ವ ಯಾವ ಹಂತ ತಲುಪಿದೆಯೆಂದರೆ ಇಲ್ಲಿ ಯಾರಿಗೂ ಆದರ್ಶಗಳು ಬೇಕಿಲ್ಲ... ಅವುಗಳಿಂದ ಹೊಟ್ಟೆ ತುಂಬುವುದಿಲ್ಲ, ಅದಕ್ಕಾಗಿ ತಮ್ಮ ಚಿಕ್ಕ ಚಿಕ್ಕ ಹೊಟ್ಟೆಗಳನ್ನು ತುಂಬಿಸಿಕೊಳ್ಳಲು ದೊಡ್ಡ ದೊಡ್ಡ  ಕೆಲಸಗಳನ್ನು ಮಾಡುತ್ತಿರುತ್ತಾರೆ... ಇಂದು ಭ್ರಷ್ಟಾಚಾರದ ಬೇರುಗಳು ಎಲ್ಲೆಲ್ಲಿಯೂ ಹಬ್ಬಿ ಬಿಟ್ಟಿದೆ, ಮನೆಯಿಂದ ಹಿಡಿದು - ಸಮಾಜದವರೆಗೆ. ಹಾಗೆ ಕೇಳಿದವೆರೆಲ್ಲ ದೂರುವುದು ವ್ಯವಸ್ಥೆ ಇರುವುದೇ ಹಾಗೆ ಬಿಡಿ ಇನ್ನುತ್ತ ಅದೇ ವ್ಯವಸ್ಥೆಯಲ್ಲಿನ ವ್ಯಕ್ತಿಗಳನ್ನು ಬೆರಳು ಮಾಡಿ ತೋರಿಸುವ ನಾವು ಇಂಥಹ  ಭ್ರಷ್ಟಾಚಾರಿ ವ್ಯವಸ್ಥೆಯನ್ನು ಬದಯಲಿಸುವುದಕ್ಕೆ ಎಂದಾದರೂ ಮನಸ್ಸು ಮಾಡಿದ್ದೆವೆಯೇ ?? ಹೋಗಲಿ ಅದರ ವಿರುದ್ದ ಮಾತನಾಡುವ ದೈರ್ಯವನ್ನಾದರೂ ಮಾಡಿದ್ದೆವೆಯೇ ?? ಮಾತನಾಡುವುದು ಕೇವಲ ಮನೆಯಲ್ಲಿ, ಸ್ನೇಹಿತರ ಮಧ್ಯೆ, ಗುಂಪು ಗುಂಪಾಗಿ ನಿಂತಾಗ ಕಾಲಹರಣದ ಚರ್ಚೆಯ ವಿಷಯಗಳಾಗಿ ಮಾತನಾಡುತ್ತ ಅಲ್ಲೇ ಮರೆತು ಬಿಡುತ್ತೇವೆ...ವ್ಯವಸ್ಥೆಯನ್ನು ಸೃಷ್ಟಿಸಿದ್ದು ವ್ಯಕ್ತಿ, ಅದು ಹಾಳಾಗುತ್ತಿರುವುದು ವ್ಯಕ್ತಿಯಿಂದ ಎಂದಾಗ ವ್ಯಕ್ಥಿಯಿಂದಲೇ ಅದನ್ನು ಬದಲಾಯಿಸುವುದು ಸಾಧ್ಯವಿಲ್ಲವೇ? ಇನ್ನು ಇತ್ತೀಚಿನ ಚುನಾವಣ ಪ್ರಕ್ರಿಯೆಗಳನ್ನು ನೋಡಿದಾಗ ನಮ್ಮ ಪ್ರಜಾಪ್ರಭುತ್ವ ಮತ್ತು ಮತದಾರನ ನೈತಿಕತೆಯ ಬಗ್ಗೆ ಅಸಹ್ಯ ಎನಿಸುವಷ್ಟು ಬೇಸರವಾಗುತ್ತದೆ....ಚುನಾವಣೆಯಲ್ಲಿ ಹಣ-ಹೆಂಡ ಹಂಚುವುದು ಇದೇ ಮೊದಲಲ್ಲ ಆದರೆ ಇತ್ತೀಚಿಗೆ ಹಣ-ಹೆಂಡದ ಜೊತೆಗೆ ಸೀರೆ, ಪಾತ್ರೆ, ಕೋಳಿ, ಅಕ್ಕಿ, ಮೂಗುಬೊಟ್ಟು, ಕೊನೆಗೆ ದೇವರ ವಿಗ್ರಹಗಳನ್ನೂ ಹಂಚುವುದು ಶುರುವಾಗಿಬಿಟ್ಟಿದೆ. ಇಂದು ವ್ಯವಸ್ಥಿತವಾಗಿ  ಸಮಾಜದ ಅಭಿವೃದ್ದಿಗಾಗಿ  ಮತ "ದಾನ" ವಾಗಿ ಉಳಿಯದೆ ಮತ "ಮಾರಾಟ"ವಾಗುತ್ತಿದೆ. ಹೇಗೆ ಮಾಡುವ ಬದಲಿಗೆ ಸಾರ್ವಜನಿಕವಾಗಿ ಮತಗಳನ್ನು ಹರಾಜು ಹಾಕುವುದೇ ಉತ್ತಮ ಎನಿಸುತ್ತದೆ. ಕೊನೆ ಪಕ್ಷ ಒಬ್ಬರನ್ನೊಬ್ಬರು ಒಳಗಿಂದೊಳಗೆ ದ್ವೇಷಿಸಿ, ಕೊಲೆ, ಅಪಹರಣಗಳಂತಹ ಕಾರ್ಯಗಳು ಸಂಬವಿಸುವುದು ಕಡಿಮೆಯಾಗುತ್ತದೆ. ನೇರವಾಗಿ ಇಷ್ಟು  ದೊಡ್ದು ಕೊಟ್ಟು ನಾನು ಮತದಾರರನ್ನು  ಖರಿದಿಸಿದ್ದೇವೆ ನೀವು ಬೇಕಾದರೆ ಅದಕ್ಕಿಂತ ಹೆಚ್ಚಿನ ದುಡ್ಡು ಕೊಟ್ಟು ಖರಿದಿಸಿ ಎಂದು ನೇರವಾಗಿ ಹೇಳಬಹುದು ಮತದಾರನು ಸಹ ಎಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆಯೋ ಆ ಪಕ್ಷಕ್ಕೆ ಮತ ಹಾಕ ಬಹುದು  ಅಲ್ಲವೇ?? ನೋಡಿ ಎಲ್ಲಿಗೆ ಬಂದು ತಲುಪಿದೆ ನಮ್ಮ ವ್ಯವಸ್ಥೆ ಮತ್ತು ವ್ಯಕ್ತಿಗಳು....ನಮ್ಮ ಸಮಾಜದಲ್ಲಿ ನೈಜ ಪ್ರಜಾಪ್ರಭುತ್ವ ಅರಳುವುದದರು ಎಂದು ???           

21 December 2010

ಕಳೆಯುತಿಹುದು ಮತ್ತೊಂದು ವರ್ಷ....ಮಾಡಿದ ಸಾಧನೆ...???

ಇಲ್ಲಿ ನಾನು ನನ್ನ ಬಗ್ಗೆಯಾಗಲಿ ಅಥವಾ ಯಾವುದೇ ಒಬ್ಬ ವ್ಯಕ್ತಿಯ ಸಾಧನೆಯ ಬಗ್ಗೆ ಬರೆಯುತ್ತಿಲ್ಲ ಬದಲಿಗೆ ಕೊಳೆತು ಗಬ್ಬು ನಾರುತ್ತಿರುವ ನಮ್ಮ ರಾಜಕೀಯ ಮತ್ತು ಪಕ್ಷಗಳ ಸಾಧನೆಗಳ ಬಗ್ಗೆ ಬರೆಯುತ್ತಿದ್ದೇನೆ. ಇನ್ನೇನು ಕೆಲವು ದಿನಗಳು ಮಾತ್ರ ಉಳಿದಿದೆ 2010  ಕಳೆದು ಹೋದ ವರ್ಷಗಳ ಸಾಲಿಗೆ ಸೇರಿಬಿಡುತ್ತದೆ.... 2010 ರಲ್ಲಿ ಆಗಿಹೋದ ಮತ್ತು ಇನ್ನು ನೆಡುತ್ತಿರುವ ಘಟನೆಗಳು ನಮ್ಮ ಪ್ರಜಾಪ್ರಭುತ್ವವನ್ನು ತಲೆ ತಗ್ಗಿಸುವಂತೆ ಮಾಡಿದೆ... ಬಹುಷಃ ಈ ವರ್ಷದಲ್ಲಿ ಕಂಡುಬಂದಂತಹ ಹಗರಣಗಳು ಬೇರೆ ಇನ್ಯಾವ ವರ್ಷದಲ್ಲೂ ಕಂಡುಬಂದಿಲ್ಲ ಎಂದು ಹೇಳಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಗರಣಗಳು ಒಂದರ ಮೇಲೊಂದಂತೆ ಬೆಳಕಿಗೆ ಬರುತ್ತಿದ್ದರೆ, ಇತ್ತ ಸಾಮಾನ್ಯ ಮನುಷ್ಯ ತನ್ನ ಜೀವನ ಸಾಗಿಸಲು ಪರದಾಡುತ್ತಿದ್ದಾನೆ... ಒಂದೊಂದು ಹಗರಣಗಳಲ್ಲಿ ಭ್ರಷ್ಟರು ನುಂಗಿ ನೀರು ಕೂಡಿರುವ ಹಣವೆಷ್ಟು?? ಇತ್ತೀಚಿಗೆ ಬೆಳಕಿಗೆ ಬಂದ 2G ಸ್ಪೆಕ್ಟ್ರಂ ಹಗರಣದಿಂದಾಗಿ ಸರ್ಕಾರಕ್ಕೆ ಅದ ನಷ್ಟ ಬರೋಬ್ಬರಿ 1.76 ಲಕ್ಷ ಕೋಟಿ...ಅಬ್ಬ!! ಲಕ್ಷ-ಕೋಟಿ ಎರಡರ ಸಮಾಗಮ...ಇನ್ನು ಕಾಮನ್ ವೆಲ್ತ್ ನಿಂದಾದ ಹಗರಣದಿಂದಾಗಿ ಆದ ನಷ್ಟ 27.000 ಕೋಟಿ...ಇನ್ನು ಮುಂಬೈ ನ ಆದರ್ಶ ಹೌಸಿಂಗ್ ಸೊಸೈಟಿಯ ಹಗರಣ....ಕಾರ್ಗಿಲ್ ನಲ್ಲಿ ಮಾಡಿದ ವೀರಯೋಧರ ಕುಟುಂಬಗಳಿಗೆ ನೀಡಿದ ಭೂಮಿಯಲ್ಲಿಯು ನಮ್ಮ ರಾಜಕೀಯ ವ್ಯಕ್ತಿಗಳು, ಅವರ ಸಂಬಂಧಿಕರಿಗೆ ಹಂಚಿದ್ದಾರಂತೆ.....ಇನ್ನು ಬೆಳಕಿಗೆ ಬಾರದ ಹಗರಣಗಳೆಷ್ಟೋ???

ಇದರಲ್ಲಿ ನಮ್ಮ ಕರ್ನಾಟಕದ ಪಾಲೇನು ಕಡಿಮೆಯಿಲ್ಲ...BJP ಆಡಳಿತಕ್ಕೆ ಬಂದು ಎಡರುವರೆ ವರ್ಷ ಆಯಿತು...ಅವರು ಈ ಅವಧಿಯಲ್ಲಿ ಮಾಡಿದ್ದು...ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ಆಪರೇಷನ್ ಕಮಲ....ನಂತರ ತಮ್ಮ  ತಮ್ಮ ಅತ್ಮಿಯರಾದವರಿಗೆ  ಖಾತೆ ಹಂಚಿಕೆಯಲ್ಲಿ (ಅದೆಷ್ಟು ಭಾರಿ) ಕಾಲಹರಣ....ಅದಾದ ನಂತರ ರೆಡ್ಡಿ ಸಹೋದರರು ತಿರುಗಿ ಬಿದ್ದಾಗ ಅವರ ಸಮಾಧಾನ ಕಾರ್ಯ....ನಂತರ BJP  ಸರ್ಕಾರವನ್ನು ಅಲುಗಾಡಿಸಿದ ರೆಸಾರ್ಟ್ ರಾಜಕೀಯ.....ಗಣಿ ಅವ್ಯವಹಾರ...ಭೂ ಹಗರಣ....ಒಂದೆರಡಲ್ಲ  ನಮ್ಮ ರಾಜ್ಯ ಸರ್ಕಾರದ ಸಾಧನೆ !!!  ಇವುಗಳ ಮಧ್ಯೆ ಸೀರೆ ಹಂಚುವುದರಲ್ಲಿ....ಚುನಾವಣ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಇವರು ಎಂದಾದರೂ ಸಾಮಾನ್ಯ ಜನರ ಕಷ್ಟಗಳೇನು...ಅದಕ್ಕೆ ಮಾಡಬೇಕಾದುದೇನು ಎಂದು ಯೋಚಿಸಿದ್ದಾರೆಯೇ ?? ಯೋಚಿಸಿದ್ದು ಭ್ರಷ್ಟರಾಗಿ ಎಷ್ಟು ಹಣ ಸಂಪಾದಿಸಬಹುದೆಂದು ಮತ್ತು ಮಾಡಿದ್ದು ದಿನ ನಿತ್ಯದ ಅಗತ್ಯ ವಸ್ತುಗಳ ಬೇರೆ ಏರಿಕೆ....ಈ ಎಲ್ಲಾ ಹಗರಣಗಳಿಂದ ಸರ್ಕಾರಕ್ಕೆ ಇಷ್ಟು ಕೋಟಿ ನಷ್ಟವಾಗಿದೆ ಎಂದು ಹೇಳುವಾಗ ನಾವು ತಿಳಯಬೇಕಾಗಿರುವುದು ನಷ್ಟವಾಗಿರುವುದು ಸರ್ಕಾರಕ್ಕೆ  ಇನಿಸಿದರು ಅದರ ಪರಿಣಾಮ ಮಾತ್ರ ಆಗುತ್ತಿರುವುದು ಜನರ ಮೇಲೆ....ನಷ್ಟವಾಗಿರುವ ಇಷ್ಟೂ ಹಣವನ್ನು ಜನ ಸಾಮಾನ್ಯರ ಅಭಿವೃದ್ದಿಗಾಗಿ ಕರ್ಚು ಮಾಡಿದರೆ ನಮ್ಮ ದೇಶ ಬಡತನ ಮುಕ್ತ ರಾಷ್ಟ್ರವಾದರೂ ಆಗುತ್ತಿತ್ತೇನೋ..ಇಂದಿಗೂ ಸಹ ನಮ್ಮ ದೇಶದಲ್ಲಿ 37% ಜನ ಬಡತನ ರೇಖೆಗಿಂತ ಕೆಳಗಿದ್ದಾರೆ, ಒಂದು ಹೊತ್ತಿನ ಊಟಕ್ಕಾಗಿ ಪಡುತ್ತಿರುವ ಸಾಮಾನ್ಯರ ಕಷ್ಟಗಳನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ...ತಾವಾಯಿತು...ತಮ್ಮ ಕುರ್ಚಿಯಾಯಿತು ಎಂದಿರುವ ಇವರಿಗೆ ಕನಿಷ್ಠ ಮಾನವಿಯತೆಯು ಇಲ್ಲದಂತಾಗಿದೆ....ಹಗರಣಗಳಿಂದಾದ ನಷ್ಟದ ಹಣ ವಾಪಸ್ಸು ಬರುವುದೇ??? ಇಷ್ಟು ಹಣದಲ್ಲಿ ಯಾರ್ಯಾರು ಎಷ್ಟು ಎಷ್ಟು ಹಣ ನುಂಗಿದ್ದಾರೆ?? ಇವುಗಳ ತನಿಖೆ ಆಗುವಷ್ಟರಲ್ಲಿ ಜನರು ಎಲ್ಲವನ್ನು ಮರೆತುಬಿಟ್ಟಿರುತ್ತಾರೆ. ಇವುಗಲ್ಲನ್ನೇ ಅಸ್ತ್ರವಾಗಿಸಿಕೊಂಡು ಪರಸ್ಪರ ಕೆಸೆರೆರಚಾಟವನ್ನು ಪ್ರತಿನಿತ್ಯ ನೋಡುತ್ತಿದ್ದೇವೆ....ಯಾವಾಗಲು "ರಾಜೀನಾಮೆ ನೀಡಲಿ" ಎಂಬ ಮಾತು ಮಾತ್ರ ಕೇಳಿಬರುತ್ತದೆ....ಕೇವಲ ರಾಜೀನಾಮೆ ನೀಡಿದರೆ ಅವರು ಮಾಡಿರುವ ನಷ್ಟಕ್ಕೆ ಸುಮನಾದಂತೆ ಏನು??? ಯಾವ ಪಕ್ಷದವರು ಹೆಚ್ಚು ದುಡ್ಡು ಕೊಡುತ್ತಾರೋ ಆ ಕಡೆಗೆ ಹಾರುವ ಶಾಸಕರು..... ಕುರ್ಚಿ ಕಳೆದುಕೊಂಡಾಗ ಕಣ್ಣಲ್ಲಿ ನೀರು ಹಾಕುವ ಇವರು ನಾವು ಆರಿಸಿ ಕಳುಹಿಸಿರುವ ನಾಯಕರು....

ಇದರ ಜೊತೆಗೆ ಮತ್ತೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯ ಚುನಾವಣ ಭರಾಟೆ...ಮತ್ತೆ ಅದೇ ಕುರುಡು ಕಾಂಚನ ಆಟ, ಚುನಾವಣ ನೀತಿ ಸಂಹಿತಿಯನ್ನು ಪಾಲಿಸುವರು ಯಾರು?? ಸಾಮಾನ್ಯ ಜನರ ಬಡತನವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳುವ ಪಕ್ಷಗಳು....ನೋಟಿನ ಆಸೆಗೆ ಓಟನ್ನು ಮಾರಿಕೊಳ್ಳುವ ಕೆಲವು ಮತದಾರರು....ನಮ್ಮನ್ನಾಳುವ ನಾಯಕರನ್ನು ಆರಿಸುವಾಗ ಅವರನ್ನು ಅಳೆಯುವ ಮಾನದಂಡವಾದರೂ ಯಾವದು?? ಜಾತಿ?? ಅಂತಸ್ತು ?? ಇದುವರೆಗೆ ಅವರು ಮಾಡಿರುವ ಜನಸೇವೆಯೇ?? ಇಲ್ಲ ನಮಗೆ ಅವರು ಆ ಕ್ಷಣದಲ್ಲಿ ನೀಡುವ ನೋಟು?? ನಮ್ಮ ಮಾನ್ಯ ಮುಖ್ಯಮಂತ್ರಿಗಳು ಮೊನ್ನೆ ಚುನಾವಣ ಪ್ರಚಾರಕ್ಕಾಗಿ ಹೋಗಿದ್ದಾಗ ಪತ್ರಿಕಾ ಪ್ರತಿನಿಧಿಯೊಬ್ಬರು ಹಗರಣಗಳ ಬಗ್ಗೆ ಕೇಳಿದಾಗ ಅವರಿಂದ ಬಂದ ಉತ್ತರ...ನಮ್ಮ ಸಾಮಾನ್ಯ ಜನರು ಹಗರಣಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅವರಿಗೆ ಇವುಗಳ ಅರಿವೇ ಇಲ್ಲ...ಈ ಬಾರಿಯೂ BJP  ಗೆದ್ದು ಬರಲಿದೆ ಎಂದು....ಇದೇ ಸಾಮಾನ್ಯ ಜನರ ಓಟು ಬೇಕಿತ್ತು ಅವರು ಮುಖ್ಯಮಂತ್ರಿಗಳಾಗಲು....ಸಂಮಿಶ್ರ  ಸರ್ಕಾರದ ಅವಧಿಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಇದನ್ನು ನಾನು ಸಾಮಾನ್ಯ ಜನರ ಮುಂದೆ ಇಡುತ್ತೇನೆ ಎಂದು ಹೇಳುವಾಗ ಸಾಮಾನ್ಯ ಜನ ಬೇಕಿತ್ತು....ಅಷ್ಟೆ ಯಾಕೆ ಕುರ್ಚಿ ಹೋಗುತ್ತದೆ ಎನ್ನುವ ಸಂದರ್ಭ ಬಂದಾಗಲೆಲ್ಲ ಕಣ್ಣಲ್ಲಿ ನೀರು ಹಾಕಿದ್ದು ಇದೆ ಸಾಮಾನ್ಯ ಜನರ ಮುಂದೆ ತಾನೆ???  ಯಾರಿಗೆ ಏನಾದರು ಆಗಲಿ ನಾವು ಭ್ರಷ್ಟರಾಗಿಯೇ ಇರುತ್ತೇವೆ ...ಹಾಗೆಯೆ ಮುಂದುವರೆಯುತ್ತೇವೆ ಎನ್ನುವ ಇಂಥಹವರ ಮಧ್ಯೆ ಜನರ ಗೋಳು ಕೇಳುವರಾರು?? ಎಷ್ಟೆಲ್ಲಾ ನಡೆಯುತ್ತಿದ್ದರು ಸುಮ್ಮನೆ ನೋಡುತ್ತಾ....ಶಾಪ ಹಾಕುತ್ತ...ಅವರಾಡುವ ರಾಜಕೀಯ ದೊಂಬರಾಟ ನೋಡುತ್ತಾ ಏನು ಮಾಡಲಾಗದೆ ಕೈಚೆಲ್ಲಿ ಕುಳಿತಿರುವ ಭವ್ಯ ಭಾರತದ, ಗಂಧದ ಗುಡಿಯ ಚೆಂದದ ಪ್ರಜೆಗಳು ನಾವುಗಳು.......